ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೆಡ್ಡಿ ಬಳಿ ಅಪಾರ ಕಪ್ಪು ಹಣವಿದೆ: ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೆಡ್ಡಿ ಬಳಿ ಅಪಾರ ಕಪ್ಪು ಹಣವಿದೆ: ಕುಮಾರಸ್ವಾಮಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯಲ್ಲಿ ಸಾಕಷ್ಟು ಕಪ್ಪು ಹಣವಿದೆ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ರೆಡ್ಡಿ ಬಳಿ ಅಪಾರ ಪ್ರಮಾಣದಲ್ಲಿ ಕಪ್ಪು ಹಣವಿದ್ದು ಆ ಹಣದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಮಂಗಳವಾರ ಎಡಿಟರ್ ಗಿಲ್ಡ್ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷ ಸಾಧನೆ ಎಂದರೆ, ಆಪರೇಶನ್ ಕಮಲದ ಮೂಲಕ ಬೇರೆ ಪಕ್ಷಗಳ ಶಾಸಕರನ್ನು ಕೋಟ್ಯಂತರ ರೂಪಾಯಿ ಕೊಟ್ಟು ಖರೀದಿ ಮಾಡಿರುವುದೇ ಈವರೆಗಿನ ದೊಡ್ಡ ಸಾಧನೆಯಾಗಿದೆ ಎಂದು ಕಟುವಾಗಿ ಟೀಕಿಸಿದರು.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದ ಕುಮಾರಸ್ವಾಮಿ, ಮೈಸೂರು ನಗರ ಪಾಲಿಕೆ ಸರ್ಕಾರಿ ವಾಹನಗಳು ಬಿಜೆಪಿ ಪ್ರಚಾರ ಕಾರ್ಯಕ್ಕೆ ಬಳಿಸಿಕೊಳ್ಳಲಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗ ಯಾವುದೇ ಕ್ರಮಕೈಗೊಳ್ಳದೆ ಮೌನವಾಗಿದೆ ಎಂದರು.

ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ದೇಶಕ್ಕೆ ಮರಳಿ ತರುವ ಬಗ್ಗೆ ಹುಯಿಲೆಬ್ಬಿಸುತ್ತಿರುವ ಎಲ್.ಕೆ.ಆಡ್ವಾಣಿಯವರು ಎನ್‌ಡಿಎ ಅಧಿಕಾರಿದಲ್ಲಿದ್ದಾಗ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೃತೀಯ ರಂಗಕ್ಕೆ ಜನರ ಬೆಂಬಲವಿದೆ: ದೇವೇಗೌಡ
ಭೀಕರ ಅಪಘಾತ: ಸುರತ್ಕಲ್‌‌ನ 6ಮಂದಿ ದಾರುಣ ಸಾವು
'ಚೌಧರಿ' ವಿರುದ್ಧ ಚಾರ್ಜ್‌‌ಶೀಟ್‌ಗೆ 1 ತಿಂಗಳ ಕಾಲಾವಕಾಶ
ಯಡಿಯೂರಪ್ಪ ರೈತರನ್ನು ಕೊಂದ ಪಾಪಿ: ಸಿದ್ದರಾಮಯ್ಯ
ಸಮಸ್ಯೆ ಪರಿಹರಿಸದಿದ್ರೆ ರಾಜಕೀಯದಿಂದ ನಿರ್ಗಮನ: ಸಿಎಂ
ಅಧಿಕಾರ ನೀಡಿ: ಸಂವಿಧಾನ ತಿದ್ದುಪಡಿ-ಆಡ್ವಾಣಿ ಭರವಸೆ