ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಕಂಬದಕೋಣೆ ರೈತರ ಸೇವಾ ಸಹಕಾರಿ ಬ್ಯಾಂಕ್ನಿಂದ 14ಕೆ.ಜಿ ಚಿನ್ನ ಹಾಗೂ 1.86ಲಕ್ಷ ರೂ.ನಗದನ್ನು ದರೋಡೆಕೋರರ ತಂಡವೊಂದು ಲಾಕರ್ ಸಹಿತ ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಕಂಬದಕೋಣೆ ರೈತ ಸೇವಾ ಸಹಕಾರಿ ಬ್ಯಾಂಕಿಗೆ ಇಂದು ಮುಂಜಾನೆ ಕಾರಿನಲ್ಲಿ ಆಗಮಿಸಿದ್ದ ದರೋಡೆಕೋರರು ತಂಡವೊಂದು 14ಕೆ.ಜಿ ಚಿನ್ನ ಹಾಗೂ 1.86ಲಕ್ಷ ರೂ.ನಗದು ಹೊಂದಿದ್ದ ಸುಮಾರು 800ಕೆ.ಜಿ.ಭಾರದ ಲಾಕರ್ ಅನ್ನು ಹೊತ್ತೊಯ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬೆರಳಚ್ಚು ತಜ್ಞರು, ಬೈಂದೂರು ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರ ಬಂಧನಕ್ಕೆ ಜಾಲ ಬೀಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದರೋಡೆ ಕುರಿತು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿರುವ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದ್ದು, ಚಿನ್ನ ಹಾಗೂ ನಗದಿಗೆ ವಿಮೆ ಮಾಡಿಸಿರುವುದಾಗಿ ವಿವರಿಸಿದರು, |