ಬಿಜಾಪುರ ಜಿಲ್ಲೆಯ ಹಾಸಂಗಿಹಾಳ್ ಕ್ರಾಸ್ ಬಳಿ 2001ರ ಸೆಪ್ಟೆಂಬರ್ 31ರಂದು ಬಸ್ನೊಳಗೆ ಪಿಸ್ತೂಲ್ನಿಂದ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ 5ಮಂದಿಯನ್ನು ಸಾಮೂಹಿಕವಾಗಿ ಕೊಚ್ಚಿ ಹತ್ಯೆಗೈದ ಪ್ರಕರಣದಲ್ಲಿನ 11ಮಂದಿ ಆರೋಪಿಗಳಿಗೆ ಬಿಜಾಪುರದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಗುಗ್ಗೇರಿ ಕುಟುಂಬಕ್ಕೆ ಸೇರಿದ ಸುಮಾರು 30ಮಂದಿಯ ಗುಂಪು ದ್ವೇಷದಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿಯೇ ಸುಂಬದ್ ಹಾಗೂ ಅವರ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಪಿಸ್ತೂಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದರು.
ಆರೋಪಿಗಳಾದ ಶಾಂತಪ್ಪ ಗುಗ್ಗೇರಿ, ಶಿವಣ್ಣ ಗುಗ್ಗೇರಿ, ಮಲ್ಯಣ್ಣ ಗುಗ್ಗೇರಿ, ಶಂಕರಪ್ಪ ಸೋಮಬಾಲ್, ಶಿವಪುತ್ರಪ್ಪ ಅಬ್ಬರಪುರ, ಸುರೇಶ್ ಬಿಲ್ಲದ, ನಾಡಗೌಡ ಚೆನ್ನರು, ಮಲ್ಯಣ್ಣ, ಶಿವಶರಣಪ್ಪ, ಶರಣಪ್ಪ ಸುಂಬದ್, ಮಂಜಪ್ಪ ಅವರುಗಳಿಗೆ ಬಿಜಾಪುರದ ಒಂದನೇ ತ್ವರಿತ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಗುಗ್ಗೇರಿ ಮತ್ತು ಸುಂಬದ್ ಕುಟುಂಬದ ನಡುವಿನ ವೈಮನಸ್ಸೇ ಈ ಘಟನೆಗೆ ಕಾರಣವಾಗಿತ್ತು.
|