ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು: ಪೂಜಾರಿ ಕಾಲಿಗೆ ಬಿದ್ದ ಬಿಜೆಪಿ ಅಭ್ಯರ್ಥಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು: ಪೂಜಾರಿ ಕಾಲಿಗೆ ಬಿದ್ದ ಬಿಜೆಪಿ ಅಭ್ಯರ್ಥಿ!
NRB
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರು ಮೇಲೆ ಕೆಸರೆಚಾಟ ಮಾಡುವುದು ಸಾಮಾನ್ಯವಾಗಿರುವ ನಡುವೆಯೇ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ಶುಕ್ರವಾರ ನಡೆದಿದೆ.

ಶುಕ್ರವಾರ ಬೆಳಿಗ್ಗೆ ತೊಕ್ಕೊಟ್ಟಿನಲ್ಲಿ ಪೂಜಾರಿ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಪಾದಯಾತ್ರೆ ಮೂಲಕ ಆಗಮಿಸಿದ ನಳಿನ್ ಕುಮಾರ್ ತೊಕ್ಕೊಟ್ಟು ಬಳಿ ಮತಯಾಚಿಸುತ್ತಿದ್ದರು. ಪೂಜಾರಿ, ಸುದ್ದಿಗಾರರೊಂದಿಗೆ ಮಾತನಾಡಿ ಹೊರಡಲು ಅನುವಾದಾಗ ನಳಿನ್, ಇದ್ದಕ್ಕಿದ್ದಂತೆ ಪೂಜಾರಿಯವರ ಬಳಿ ಬಂದು ಕಾಲು ಹಿಡಿದು ಆಶೀರ್ವಾದ ಪಡೆದು, ಮೂರು ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್, ನನಗೂ ಮತ್ತು ಪೂಜಾರಿಯವರಿಗೆ ಪಕ್ಷದ ಸಂಬಂಧ ತಾತ್ವಿಕ ಭಿನ್ನತೆಯಿದ್ದರೂ, ವೈಯಕ್ತಿಕವಾಗಿ ದ್ವೇಷವಿಲ್ಲ. ಒಬ್ಬ ಕಿರಿಯನಾಗಿ ಹಿರಿಯರ ಆಶೀರ್ವಾದ ಪಡೆಯುವುದು ಸಹಜ. ಅವರನ್ನು ನೋಡಿದ ಮೇಲೆ ಅವರಿಗೆ ಗೌರವ ಕೊಡದೆ ಮುಂದೆ ಹೊರಡಲು ಮನಸ್ಸಾಗಲಿಲ್ಲ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲು
ನೀರಸ ಮತದಾನಕ್ಕೆ ಆಯೋಗ ಹೊಣೆ: ಕುಮಾರಸ್ವಾಮಿ
ಗುಲ್ಬರ್ಗಾ ಜೈಲಿನಿಂದ ಇಬ್ಬರು ಕೈದಿಗಳು ಪರಾರಿ
ಬಿಜೆಪಿ ದಲಿತರೊಬ್ಬರನ್ನು ಸಿಎಂ ಮಾಡಲಿ: ಗುಲಾಂ
14 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಯಡಿಯೂರಪ್ಪ
ಭವಿಷ್ಯ ಕೇಳುತ್ತಿದ್ರೆ.ಮನೆಯಲ್ಲಿ ಕೂತ್ಕೋಬೇಕಾಗುತ್ತೆ: ದೇವೇಗೌಡ