ನಕ್ಸಲ್ ಸಂಘಟನೆಗೆ ಬೆಂಬಲ ನೀಡಿರುವ ಆರೋಪದ ಮೇಲೆ ಶೃಂಗೇರಿ ತಾಲೂಕಿನ ತಲಿಕೋಡು ನಿವಾಸಿ ಸುಂದರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ನಕ್ಸಲೀಯರ ಸಂರ್ಪಕ ಹೊಂದಿದ್ದ ಶಂಕೆಯ ಮೇಲೆ ಜಯಪುರದ ನಿವಾಸಿ ಶಂಕರ ಗೌಡ ಎಂಬಾತನನ್ನು ಬಂಧಿಸಿದ ಸಂದರ್ಭದಲ್ಲಿ ಆತ ನೀಡಿದ ಮಾಹಿತಿ ಆಧಾರದಲ್ಲಿ ಸುಂದರ್ನನ್ನು ಸೆರೆ ಹಿಡಿಯಲಾಯಿತು ಎಂದು ಹೇಳಿದ್ದಾರೆ.
ಬಂಧಿತ ಸುಂದರ್ನಿಂದ 9ಜಿಲೆಟಿನ್ ಕಡ್ಡಿ, 5ಡಿಟೋನೇಟರ್ ಸೇರಿದಂತೆ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ತಿಳಿಸಿದ್ದಾರೆ. ಮಾತುವಳ್ಳಿಯಲ್ಲಿ ಮುಂಡಗಾರು ಲತಾ ಸೇರಿದಂತೆ ನಕ್ಸಲೀಯರ ತಂಡವೊಂದು ಪೊಲೀಸರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಸುಂದರ್ ಭಾಗಿಯಾಗಿರುವ ನಿಟ್ಟಿನಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದರು. |