ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭದ್ರಾವತಿ ಗಲಾಟೆ-ಸಿಬಿಐ ತನಿಖೆಗೆ ಬಂಗಾರಪ್ಪ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭದ್ರಾವತಿ ಗಲಾಟೆ-ಸಿಬಿಐ ತನಿಖೆಗೆ ಬಂಗಾರಪ್ಪ ಆಗ್ರಹ
ಶುಕ್ರವಾರ ಭದ್ರಾವತಿಯಲ್ಲಿ ನಡೆದ ಬಂಗಾರಪ್ಪ ಮತ್ತು ಶಾಸಕ ಸಂಗಮೇಶ್ ಬೆಂಬಲಿಗರ ನಡುವೆ ನಡೆದ ಗಲಭೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಗಲಭೆಗೆ ಬಿಜೆಪಿಯೇ ಕಾರಣ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಆಗ್ರಹಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯ ಹಿಂದೆ ಬಿಜೆಪಿ ಕೈವಾಡವಿರುವುದು ಸ್ಪಷ್ಟವಾಗಿದೆ. ಶಾಸಕ ಸಂಗಮೇಶ್ ಅವರ ಮಕ್ಕಳು, ತಮ್ಮ, ಎಲ್ಲರೂ ಬಿಜೆಪಿ ಸೇರಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ, ಬಿಜೆಪಿ ಕಾರ್ಯಕರ್ತರು ಭದ್ರಾವತಿಯಲ್ಲಿ ಕಾಂಗ್ರೆಸ್ ಸಮಾವೇಶದ ವೇಳೆ ಉದ್ದೇಶಪೂರ್ವಕವಾಗಿ ದಾಂದಲೆ ಎಬ್ಬಿಸಿದ್ದು, ಈ ಘಟನೆ ಕುರಿತು ಸಿಬಿಐ ತನಿಖೆ ನಡೆಸುವಂತೆ ತಿಳಿಸಿದ್ದಾರೆ.

ಭದ್ರಾವತಿಯಲ್ಲಿ ನಡೆದ ಕಾಂಗ್ರೆಸ್ ಸಭೆಯೊಳಗೆ ಶಾಸಕ ಸಂಗಮೇಶ್ ಹಾಗೂ ಬಂಗಾರಪ್ಪ ನಡುವೆ ನಡೆದ ಮಾತಿನ ಚಕಮಕಿಯನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ದುಷ್ಕಮಿಗಳು ಈ ಘಟನೆಗೆ ಕಾರಣರಾಗಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಚಿತ್ರೀಕರಿಸಿರುವ ವಿಡಿಯೋ ದೃಶ್ಯಾವಳಿ ನೋಡಿದರೆ ಸತ್ಯಾಂಶ ಬಹಿರಂಗವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಗರ ತಾಲೂಕು ತಾಳಗುಪ್ಪದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌‌ನಲ್ಲಿನ ಒಳಜಗಳದಿಂದ ಈ ಘಟನೆ ನಡೆದಿದೆ. ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡವಿಲ್ಲ. ವಿರೋಧಿಗಳು ದುರುದ್ದೇಶದಿಂದ ಬೊಟ್ಟು ಮಾಡುತ್ತಿದ್ದಾರೆ ಎಂದು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೃಂಗೇರಿ: ನಕ್ಸಲ್ ಬೆಂಬಲಿಗ ಸುಂದರ್ ಸೆರೆ
ಬಿಜೆಪಿ ನಮ್ಮ ಮೊದಲ ಶತ್ರು: ಕುಮಾರಸ್ವಾಮಿ
ಮಂಗಳೂರು: ಪೂಜಾರಿ ಕಾಲಿಗೆ ಬಿದ್ದ ಬಿಜೆಪಿ ಅಭ್ಯರ್ಥಿ!
ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲು
ನೀರಸ ಮತದಾನಕ್ಕೆ ಆಯೋಗ ಹೊಣೆ: ಕುಮಾರಸ್ವಾಮಿ
ಗುಲ್ಬರ್ಗಾ ಜೈಲಿನಿಂದ ಇಬ್ಬರು ಕೈದಿಗಳು ಪರಾರಿ