ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿಯಲ್ಲಿ ನಾಲ್ವರು ಸಜೀವ ದಹನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿಯಲ್ಲಿ ನಾಲ್ವರು ಸಜೀವ ದಹನ
ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ತಾಯಿ ಹಾಗೂ ಮೂರು ಮಕ್ಕಳು ಸಜೀವವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ಬಾಪೂಜಿ ನಗರದಲ್ಲಿ ಶನಿವಾರ ಸಂಭವಿಸಿದೆ.

ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಇಡೀ ಮನೆಯನ್ನು ಆವರಿಸಿ ಹೊರಹೋಗಲು ಅವಕಾಶವಾಗದೆ ಆಲಂಬಿ(45), ಮಕ್ಕಳಾದ ನಜ್ಮಾ(15), ಸಬಿಯಾ(7) ಹಾಗೂ ಗೌಷಿಯಾ(6) ಸಾವನ್ನಪ್ಪಿದ್ದಾರೆ.

ಮನೆಯಲ್ಲಿನ ಉಳಿದ ಮಂದಿ ಕೆಲಸಕ್ಕೆ ಹೊರಹೋದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಮನೆಗೆ ಬೆಂಕಿ ಹಿಡಿದ ಸಂದರ್ಭದಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲೇ ನಾಲ್ವರು ಸಜೀವವಾಗಿ ದಹನವಾಗಿ ಹೋಗಿದ್ದರು. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಕೂಡ ದೇಹ ಶೇ.80ರಷ್ಟು ಸುಟ್ಟು ಕರಕಲಾಗಿದ್ದು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದರು.

ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭದ್ರಾವತಿ ಗಲಾಟೆ-ಸಿಬಿಐ ತನಿಖೆಗೆ ಬಂಗಾರಪ್ಪ ಆಗ್ರಹ
ಶೃಂಗೇರಿ: ನಕ್ಸಲ್ ಬೆಂಬಲಿಗ ಸುಂದರ್ ಸೆರೆ
ಬಿಜೆಪಿ ನಮ್ಮ ಮೊದಲ ಶತ್ರು: ಕುಮಾರಸ್ವಾಮಿ
ಮಂಗಳೂರು: ಪೂಜಾರಿ ಕಾಲಿಗೆ ಬಿದ್ದ ಬಿಜೆಪಿ ಅಭ್ಯರ್ಥಿ!
ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲು
ನೀರಸ ಮತದಾನಕ್ಕೆ ಆಯೋಗ ಹೊಣೆ: ಕುಮಾರಸ್ವಾಮಿ