ತೃತೀಯರಂಗ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ಹಗಲು ಕನಸು ಎಂದು ಕಾಂಗ್ರೆಸ್ ಹೇಳಿದೆ.
ಯಾವುದೇ ವಿಚಾರದ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿರದ ಗೊಂದಲದ ಗೂಡಾಗಿರುವ ತೃತೀಯರಂಗದ ಅಧಿಕಾರದ ಕನಸು ಹಗಲು ಕನಸಿದ್ದಂತೆ ಎಂದು ಕಾಂಗ್ರೆಸ್ ವಕ್ತಾರ ವಿ.ಆರ್.ಸುದರ್ಶನ ಸುದ್ದಿಗಾರರೊಂದಿಗೆ ಮಾತನಾಡುತ್ತ ಲೇವಡಿ ಮಾಡಿದ್ದರು.
ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹತಾಶಗೊಂಡಿರುವ ಬಿಜೆಪಿ ನಾಯಕತ್ವ ವಿಚಾರದಲ್ಲಿ ಭಿನ್ನರಾಗ ತೆಗೆದಿದೆ. ಆಡ್ವಾಣಿ ಜೊತೆಗೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕರಿದ್ದಾರೆ ಎನ್ನುವ ಆ ಪಕ್ಷದ ಭಿನ್ನರಾಗದ ಉದ್ದೇಶ ಜನರಿಗೆ ಗೊತ್ತಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ದೇಶದಲ್ಲಿ ಎರಡು ಹಂತದ ಚುನಾವಣೆ ಸಂಪೂರ್ಣಗೊಂಡು ಮೂರನೇ ಹಂತದ ಹೊಸ್ತಿಲಲ್ಲಿರುವಾಗ ಬಿಜೆಪಿ ನಾಯಕತ್ವ ಕುರಿತಾದ ಹೇಳಿಕೆಗಳು ಆ ಪಕ್ಷದ ಹತಾಶೆಯನ್ನು ಬಿಂಬಿಸುತ್ತದೆ ಎಂದರು. |