ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೆಡ್ಡಿ ಸಹೋದರರ ರಾಜೀನಾಮೆಗೆ ಜೆಡಿಎಸ್ ಪಟ್ಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೆಡ್ಡಿ ಸಹೋದರರ ರಾಜೀನಾಮೆಗೆ ಜೆಡಿಎಸ್ ಪಟ್ಟು
ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ಗುತ್ತಿಗೆಯನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದ್ದರೂ ಕೂಡ, ಗಣಿಗಾರಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಕಾನೂನಿಗೆ ಅಗೌರವ ತೋರಿರುವ ಓಬಳಾಪುರಂ ಮೈನ್ಸ್ ಮಾಲೀಕ, ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಎಂದು ಜನತಾದಳ(ಎಸ್) ಆಗ್ರಹಿಸಿದೆ.

ಸಚಿವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಗಳೇ ರಾಜೀನಾಮೆ ಪಡೆಯಬೇಕು ಇಲ್ಲವೇ ರಾಜ್ಯಪಾಲರೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಕ್ಷ ಕಾನೂನು ಹೋರಾಟಕ್ಕೂ ಸಿದ್ದವಿದೆ ಎಂದು ಜೆಡಿಎಸ್‌ನ ಪ್ರೊ.ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗುಂಡೂರಾವ್ ಹಾಗೂ ವಕ್ತಾರ ರಮೇಶ್ ಬಾಬು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.

ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಕರ್ನಾಟಕ ನೆಲ ಸಂರಕ್ಷಣಾ ಸಮಿತಿಯು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ಇದರ ಫಲವಾಗಿ ಓಬಳಾಪುರಂ ಕಂಪೆನಿಗೂ ಕೇಂದ್ರ ಸರ್ಕಾರ ಗಣಿಗಾರಿಕೆಗೆ ತಡೆ ನೀಡಿತ್ತು.

ಇದಕ್ಕೆ ಪ್ರತಿಯಾಗಿ ಜನಾರ್ದನ ರೆಡ್ಡಿ ಅವರು ಯಾವುದೇ ಕಾರಣಕ್ಕೂ ಗಣಿಗಾರಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಸೋಮವಾರ ತಿಳಿಸಿದ್ದರು. ಅಧಿಕಾರದ ದರ್ಪದಿಂದ ಆಡಿರುವ ಮಾತಿನಲ್ಲಿ ಉದ್ದಟತನವೂ ತುಂಬಿದೆ ಎಂದು ರಾಧಾಕೃಷ್ಣ ಹೇಳಿದರು. ಗಡಿ ಕಲ್ಲನ್ನು ಕಿತ್ತಿರುವ ಸಚಿವರು ಕನ್ನಡದ ನೆಲವನ್ನು ಆಂಧ್ರಪ್ರದೇಶವನ್ನಾಗಿ ಪರಿವರ್ತಿಸಿ, ಕರ್ನಾಟಕದ ಸೌರ್ವಭೌಮತೆಗೆ ಧಕ್ಕೆ ತಂದಿದ್ದಾರೆ ಎಂದು ಟೀಕಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ಜಾತ್ಯತೀತ ಸಮಾಜಕ್ಕೆ ಬಸವ ತತ್ವ ಅಗತ್ಯ: ಠಾಕೂರ್
ಸಂಪುಟ ಪುನರ್ ರಚನೆ ಇಲ್ಲ: ಬಿ.ಎಸ್.ಯಡಿಯೂರಪ್ಪ
ಹಣ ಹಂಚಿಕೆ: ದೇವೇಗೌಡರ ವಿರುದ್ಧ ಬಿಜೆಪಿ ದೂರು
ಕಾಂಗ್ರೆಸ್ ರೋಮ್ ರಾಜ್ಯ ಕಟ್ಟಲು ಹೊರಟಿದೆ: ಅನಂತ್ ಕುಮಾರ್
ನೀತಿ ಸಂಹಿತೆ: ಪುರೋಹಿತರೂ ಪೊಲೀಸರ ಅತಿಥಿ!