ಬಿಜೆಪಿಯವರು ರಾಮನಾಮ ಜಪಿಸುತ್ತ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿದ್ದಾರೆ. ಈ ಹಣ ಏನಾಯಿತು ಎಂಬ ಬಗ್ಗೆ ಬಿಜೆಪಿ ಮೊದಲು ಉತ್ತರಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಹಿರಿಯ ಉಪಾಧ್ಯಕ್ಷ ಎಚ್.ಹನುಮಂತಪ್ಪ ಆಗ್ರಹಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂಬ ಭರವಸೆ ನೀಡುವುದರೊಂದಿಗೆ ರಾಮನ ಹೆಸರಲ್ಲಿ ಸಂಗ್ರಹಿಸಿರುವ ಹಣದಲ್ಲಿ 600 ಕೋಟಿ ರೂಪಾಯಿಯಷ್ಟು ವಿದೇಶದಿಂದ ಬಂದುದಾಗಿದೆ. ಸ್ವಿಸ್ ಬ್ಯಾಂಕಿನಲ್ಲಿ ಇರುವ ಹಣದ ಬಗ್ಗೆ ಮಾತನಾಡುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ, ಮಂದಿರದ ಹೆಸರಲ್ಲಿ ಸಂಗ್ರವಾದ ಹಣ ಏನಾಯಿತು ಎಂಬ ಬಗ್ಗೆ ಉತ್ತರಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಭಾರತಕ್ಕೆ ಬೇಕಾಗಿರುವುದು ಕ್ರಿಯಾಶೀಲ ಪ್ರಧಾನಿಯೇ ಹೊರತು, ಚರ್ಚೆ ನಡೆಸುವಂತಹ ಪ್ರಧಾನಿ ಅಲ್ಲ. ಈಗ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸುವ ಆಡ್ವಾಣಿ, ಸಂಸತ್ನಲ್ಲಿ ಚರ್ಚೆ ನಡೆಸದೆ ಬಹಿಷ್ಕಾರ ಹಾಕುವುದು ಯಾಕೆ?ಎಂದು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. |