ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಮಮಂದಿರ ಹೆಸರಲ್ಲಿ ಸಂಗ್ರಹವಾದ ಹಣ ಏನಾಯಿತು?: ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮಮಂದಿರ ಹೆಸರಲ್ಲಿ ಸಂಗ್ರಹವಾದ ಹಣ ಏನಾಯಿತು?: ಕಾಂಗ್ರೆಸ್
ಬಿಜೆಪಿಯವರು ರಾಮನಾಮ ಜಪಿಸುತ್ತ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿದ್ದಾರೆ. ಈ ಹಣ ಏನಾಯಿತು ಎಂಬ ಬಗ್ಗೆ ಬಿಜೆಪಿ ಮೊದಲು ಉತ್ತರಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಹಿರಿಯ ಉಪಾಧ್ಯಕ್ಷ ಎಚ್.ಹನುಮಂತಪ್ಪ ಆಗ್ರಹಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂಬ ಭರವಸೆ ನೀಡುವುದರೊಂದಿಗೆ ರಾಮನ ಹೆಸರಲ್ಲಿ ಸಂಗ್ರಹಿಸಿರುವ ಹಣದಲ್ಲಿ 600 ಕೋಟಿ ರೂಪಾಯಿಯಷ್ಟು ವಿದೇಶದಿಂದ ಬಂದುದಾಗಿದೆ. ಸ್ವಿಸ್ ಬ್ಯಾಂಕಿನಲ್ಲಿ ಇರುವ ಹಣದ ಬಗ್ಗೆ ಮಾತನಾಡುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ, ಮಂದಿರದ ಹೆಸರಲ್ಲಿ ಸಂಗ್ರವಾದ ಹಣ ಏನಾಯಿತು ಎಂಬ ಬಗ್ಗೆ ಉತ್ತರಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಭಾರತಕ್ಕೆ ಬೇಕಾಗಿರುವುದು ಕ್ರಿಯಾಶೀಲ ಪ್ರಧಾನಿಯೇ ಹೊರತು, ಚರ್ಚೆ ನಡೆಸುವಂತಹ ಪ್ರಧಾನಿ ಅಲ್ಲ. ಈಗ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸುವ ಆಡ್ವಾಣಿ, ಸಂಸತ್‌ನಲ್ಲಿ ಚರ್ಚೆ ನಡೆಸದೆ ಬಹಿಷ್ಕಾರ ಹಾಕುವುದು ಯಾಕೆ?ಎಂದು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನಾರ್ದನ ರೆಡ್ಡಿ ಸುಳ್ಳು ಹೇಳುವುದು ಬಿಡಲಿ: ಚನ್ನಿಗಪ್ಪ
ಡಾ.ವೀರೇಂದ್ರ ಹೆಗ್ಗಡೆಗೆ 'ಬಸವಶ್ರೀ' ಪ್ರಶಸ್ತಿ
ಮೋದಿ ರಾಜೀನಾಮೆಗೆ ಯುವ ಕಾಂಗ್ರೆಸ್ ಆಗ್ರಹ
ಗಣಿಗಾರಿಕೆ ರದ್ದತಿ ಹಿಂದೆ ಸಿಎಂ ಕೈವಾಡ: ಡಿಕೆಶಿ
ಚಪ್ಪಲಿ ಎಸೆತ-ಘಟನೆ ಹಿಂದೆ ದೇವೇಗೌಡರ ಕೈ: ಯಡಿಯೂರಪ್ಪ
ನಂದಕುಮಾರ್: ಆರೋಪ ಸಾಬೀತಾದರೆ 2ವರ್ಷ ಜೈಲು