ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಡ್ಯ: ಜಗ್ಗೇಶ್ ವಿರುದ್ಧ ಅಂಬರೀಷ್ ವಾಗ್ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಡ್ಯ: ಜಗ್ಗೇಶ್ ವಿರುದ್ಧ ಅಂಬರೀಷ್ ವಾಗ್ದಾಳಿ
'ನಾನು ಏನೆಂಬುದನ್ನು ಜಗ್ಗೇಶ್ ಅವರು ಹೆಂಡತಿ, ಮಕ್ಕಳನ್ನು ಕೇಳಿ ತಿಳಿದುಕೊಳ್ಳಲಿ ಎಂದು ಮಂಡ್ಯ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಮುಖಂಡ ಜಗ್ಗೇಶ್ ತನ್ನ ಬಗ್ಗೆ ನೀಡಿರುವ ಹೇಳಿಕೆಗಳು ಬಾಲಿಶವಾಗಿದೆ. ನಾನು ಏನಾಗಿದ್ದೇನೆ, ನನ್ನ ನಡವಳಿಕೆಗಳು ಹೇಗಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಏಕೆ ನನ್ನ ಬಗ್ಗೆ ಜಗ್ಗೇಶ್ ಹೆಂಡತಿ, ಮಕ್ಕಳನ್ನೇ ಕೇಳಿ ತಿಳಿದುಕೊಳ್ಳಲಿ ಎಂದು ಅಂಬಿ ಶ್ರೀರಂಗಪಟ್ಟಣದಲ್ಲಿ ನಡೆದ ಶೋ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಕಲಾವಿದರಿಗೆ ಬೆದರಿಕೆ ಹಾಕುವಷ್ಟು ಮುಟ್ಠಾಳ ನಾನಲ್ಲ, ಯಾವುದೇ ಒಬ್ಬ ಕಲಾವಿದನನ್ನು ಕರೆದು ಈ ಬಗ್ಗೆ ವಿಚಾರಿಸಲಿ ಎಂದ ಅವರು, ಜಗ್ಗೇಶ್ ಏನೆಲ್ಲ ಮಾತನಾಡಿದ್ದಾರೆ. ಅವರು ತುಂಬಾ ದೊಡ್ಡ ಮನುಷ್ಯ, ಹಣಕ್ಕಾಗಿ ವ್ಯಕ್ತಿತ್ವ ಮಾರಿಕೊಂಡವರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

ಕನ್ನಡ ಚಿತ್ರರಂಗಕ್ಕೆ ನಟ ಅಂಬರೀಷ್ ಸೌರ್ವಭೌಮರಲ್ಲ, ಕನ್ನಡಕ್ಕೆ ಡಾ.ರಾಜ್ ಕುಮಾರ್ ಅವರೇ ನಾಯಕರು, ಮಂಡ್ಯ ಕ್ಷೇತ್ರದಲ್ಲಿ ಕಲಾವಿದರು ಬಂದು ಮತ ಪ್ರಚಾರ ನಡೆಸಬಾರದು ಎಂದು ಅಂಬಿ ಫರ್ಮಾನು ಹೊರಡಿಸಲು ಮಂಡ್ಯ ಕ್ಷೇತ್ರವೇನೂ ತಾಲಿಬಾನ್‌ನಲ್ಲಿಲ್ಲ ಎಂದು ಜಗ್ಗೇಶ್ ಇತ್ತೀಚೆಗೆ ಕಟುವಾಗಿ ಟೀಕಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸಕ ಸಿ.ಟಿ.ರವಿಗೆ ಷೋಕಾಸ್ ನೋಟಿಸ್ ಜಾರಿ
ಶಿವಮೊಗ್ಗದಲ್ಲಿ ಮಾರ್ಗರೇಟ್ ವಿರುದ್ಧ ಎಫ್‌ಐಆರ್
ಮೋದಿ ವಜಾಗೊಳಿಸಲು ಮೊಯ್ಲಿ ಬಿಜೆಪಿಗೆ ಆಗ್ರಹ
ನಾಳೆ ಗೌಡ, ಬಂಗಾರಪ್ಪ, ಪೂಜಾರಿ ಭವಿಷ್ಯ ನಿರ್ಧಾರ
ನೈಸ್: ನೋಟಿಸ್ ನೀಡಲು ಹೋದ ಅಧಿಕಾರಿಗಳಿಗೆ ಥಳಿತ
ನೀತಿ ಸಂಹಿತೆ: ಡಿಕೆಶಿ ವಿರುದ್ಧ ಪ್ರಕರಣ ದಾಖಲು