ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಹಾತ್ಮಗಾಂಧಿ-ಬೋಸ್‌ಗೂ ನೀತಿ ಸಂಹಿತೆ ಬಿಸಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಾತ್ಮಗಾಂಧಿ-ಬೋಸ್‌ಗೂ ನೀತಿ ಸಂಹಿತೆ ಬಿಸಿ!
ಊಟೋಪಚಾರ, ಅರ್ಚಕರು ಹೀಗೆ ಪ್ರತಿಯೊಂದಕ್ಕೂ ಚುನಾವಣಾ ನೀತಿ ಸಂಹಿತೆಯಿಂದ ರಾಜಕೀಯ ಪಕ್ಷಗಳು ಕಿರಿಕಿರಿಗೆ ಒಳಗಾಗಿರುವ ವಿಷಯ ಸಾಮಾನ್ಯ, ಆದರೆ ಇದೀಗ ಮಹಾತ್ಮಗಾಂಧಿ, ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಭಾವಚಿತ್ರಕ್ಕೂ ನೀತಿ ಸಂಹಿತೆಯ ಬಿಸಿತಟ್ಟಿರುವ ಅಂಶ ಬಾಗಲಕೋಟೆಯಲ್ಲಿ ನಡೆದಿದೆ.

ರಾಜ್ಯದಲ್ಲಿ ಗುರುವಾರ 2ನೇ ಹಾಗೂ ಅಂತಿಮ ಹಂತದ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಬಾಗಲಕೋಟೆ ನವನಗರ ಶಾಲೆಯೊಂದರ ಮತಗಟ್ಟೆಯ ಗೋಡೆಯ ಮೇಲೆ ತೂಗು ಹಾಕಿರುವ ರಾಷ್ಟ್ರಪಿತ ಮಹಾತ್ಮಗಾಂಧಿ, ನೇತಾಜಿ ಸುಭಾಶ್ಚಂದ್ರ ಬೋಸ್ ಸೇರಿದಂತೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಪೇಪರ್‌ನಿಂದ ಮುಚ್ಚಿರುವ ಅಂಶ ಬಯಲಾಗಿದ್ದು, ಗಾಂಧಿ, ಬೋಸ್ ಕೂಡ ಒಂದು ಪಕ್ಷದ ವಕ್ತಾರರೇ? ಅವರ ಭಾವಚಿತ್ರವನ್ನು ಪೇಪರ್‌ನಿಂದ ಮುಚ್ಚುವ ಅಗತ್ಯ ಇತ್ತೇ?ಎಂಬುದಾಗಿ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಂಧಿ, ಬೋಸ್, ಪಟೇಲ್, ಶಾಸ್ತ್ರಿ ಸೇರಿದಂತೆ ಹಲವು ನಾಯಕರ ಭಾವಚಿತ್ರವನ್ನು ಪೇಪರ್‌ನಿಂದ ಮುಚ್ಚಿರುವುದು ಯಾಕೆ ಎಂಬ ಪ್ರಶ್ನೆಗೆ ಮತಗಟ್ಟೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದಾರೆ. ಚುನಾವಣಾ ಆಯೋಗದಿಂದ ಬಂದ ಆದೇಶದ ಮೇರೆಗೆ ರೆವಿನ್ಯೂ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎಂಬ ಸಮಜಾಯಿಷಿಕೆ ಅಧಿಕಾರಿಗಳದ್ದು.

ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಪೇಪರ್‌ನಿಂದ ಮುಚ್ಚುವ ಮೂಲಕ ಜಿಲ್ಲಾಡಳಿತ ಅಪಮಾನ ಮಾಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಗಾಂಧಿ, ಬೋಸ್‌ಗೂ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದಂತಾಗಿದೆ!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಖೋಟಾ ನೋಟು ಜಾಲ-ನಾಲ್ವರ ಬಂಧನ
ನೌಷಾದ್ ಹತ್ಯೆ-ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ರಾಜ್ಯದ 11 ಕ್ಷೇತ್ರದಲ್ಲಿ ಬಿರುಸಿನ ಮತದಾನ
ಮಂಡ್ಯ: ಜಗ್ಗೇಶ್ ವಿರುದ್ಧ ಅಂಬರೀಷ್ ವಾಗ್ದಾಳಿ
ಶಾಸಕ ಸಿ.ಟಿ.ರವಿಗೆ ಷೋಕಾಸ್ ನೋಟಿಸ್ ಜಾರಿ
ಶಿವಮೊಗ್ಗದಲ್ಲಿ ಮಾರ್ಗರೇಟ್ ವಿರುದ್ಧ ಎಫ್‌ಐಆರ್