ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುಮಾರಸ್ವಾಮಿ ಡಿಸಿಗೆ ಬೆದರಿಕೆ ಹಾಕಿದ್ದರು: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿ ಡಿಸಿಗೆ ಬೆದರಿಕೆ ಹಾಕಿದ್ದರು: ಯಡಿಯೂರಪ್ಪ
NRB
ಅಕ್ರಮ ಕಟ್ಟಡ ನಿರ್ಮಾಣ ನಿಲ್ಲಿಸದಿದ್ದರೆ ನಿಮ್ಮ ಕಚೇರಿ ಸುಡುವುದಾಗಿ ರಾಮನಗರ ಜಿಲ್ಲಾಧಿಕಾರಿಗೆ 2008ರ ಸೆಪ್ಟೆಂಬರ್ 17ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬೆದರಿಕೆ ಹಾಕಿರುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಬಹಿರಂಗ ಪಡಿಸಿದರು.

ಕುಮಾರಸ್ವಾಮಿ ಅವರು ಅಂದು ಹಾಕಿದ ಬೆದರಿಕೆಯಿಂದ ಆತಂಕಗೊಂಡ ಜಿಲ್ಲಾಧಿಕಾರಿಗಳು ಲಿಖಿತವಾಗಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಅದನ್ನು ಮುಖ್ಯಮಂತ್ರಿಗಳು ಸುದ್ದಿಗಾರರ ಮುಂದೆ ಪ್ರದರ್ಶಿಸಿದರು.

ಬೆದರಿಸುವುದು ಹೆದರಿಸುವುದು ಜೆಡಿಎಸ್ ಮುಖಂಡರಿಗೆ ಗೊತ್ತಿರುವುದನ್ನು ಈ ಪತ್ರ ಸಾಬೀತುಪಡಿಸಿದೆ. ಆದರೂ ನಮ್ಮ ಮೇಲೆ ಇಲ್ಲದ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ನಮ್ಮ ಮೂರು ಲಾರಿಯಲ್ಲಿ ಹಾಸನಕ್ಕೆ ಹಣ ಸಾಗಿಸಲಾಗಿದೆ. ಅಂಬ್ಯುಲೆನ್ಸ್ , ಜೀಪ್ಸ್‌ಗಳಲ್ಲಿ ಹಣ ಸಾಗಿಸಿದ್ದಾರೆ ಎಂಬ ಆರೋಪ ಮಾಡುವ ಮೂದಲು ಅಂಕಿ-ಅಂಶಗಳನ್ನು ನೀಡಲಿ, ದಾಖಲೆಗಳಿದ್ದರೆ ನೀಡಲಿ ಎಂದು ಸವಾಲು ಹಾಕಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಗಸ್ಟ್‌ನೊಳಗೆ ಬಿಬಿಎಂಪಿ ಚುನಾವಣೆ: ಯಡಿಯೂರಪ್ಪ
ಕೈ ಕಡಿಯಿರಿ ಹೇಳಿಕೆ: ಕಾಗೋಡು ತಿಮ್ಮಪ್ಪಗೆ ಜಾಮೀನು ಮಂಜೂರು
ದೂರು ವಾಪಸ್ ಪಡೆಯಲು ಶಾಸಕ ರಾಜು ಧರಣಿ
ಗಣಿ: ಗಡಿ ಸಮೀಕ್ಷೆಗೆ 'ಸುಪ್ರೀಂ' ಆರು ವಾರ ಗಡುವು
'ಹೇಳಿದಷ್ಟು ಬರೆದುಕೊಳ್ಳಿ': ಪತ್ರಕರ್ತರಿಗೆ ಶಾಸಕರ ತಾಕೀತು!
ಕೊಂಡಜ್ಜಿ ಸಾವು-ರಾಜಕೀಯ ಬಣ್ಣ ಬೇಡ: ರೆಡ್ಡಿ