ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೆಡ್ಡಿ ಸಹೋದರರ ರಾಜಿನಾಮೆಗೆ ದೇಶಪಾಂಡೆ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೆಡ್ಡಿ ಸಹೋದರರ ರಾಜಿನಾಮೆಗೆ ದೇಶಪಾಂಡೆ ಒತ್ತಾಯ
ಅಕ್ರಮ ಗಣಿಗಾರಿಕೆ ಸಂಬಂಧ ಆರು ವಾರಗಳ ಸಮೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯ ಮುಗಿಯುವ ತನಕ ಸಚಿವರಾದ ಜರ್ನಾದನ ರೆಡ್ಡಿ, ಶ್ರೀರಾಮುಲು ಹಾಗೂ ಕರುಣಾಕರ ರೆಡ್ಡಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ ದೇಶಪಾಂಡೆ ಒತ್ತಾಯಿಸಿದ್ದಾರೆ.

ಸಮೀಕ್ಷೆ ಕಾರ್ಯ ಪಾರದರ್ಶಕ ಹಾಗೂ ನಿಕ್ಪಕ್ಷಪಾತವಾಗಿ ನಡೆಯಬೇಕಾದರೆ ಜರ್ನಾದನ ರೆಡ್ಡಿ, ಶ್ರೀರಾಮುಲು ಹಾಗೂ ಕರುಣಾಕರ ರೆಡಿ ಅವರು ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಸಮೀಕ್ಷೆ ಕಾರ್ಯಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಬೇಕು. ಹಾಗಾದರೆ ಸತ್ಯ ಏನೆಂಬುದು ಹೊರಬರಲಿಕ್ಕೆ ಸಾಧ್ಯವಾಗಲಿದೆ ಎಂದು ಅವರು ಪಕ್ಷದ ಕಚೇರಿಯಲ್ಲಿ ವಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿಲ್ಲವಾದರೆ, ಸಮೀಕ್ಷೆಗೆ ರೆಡ್ಡಿ ಸಹೋದರರು ಏಕೆ ಹೆದರಬೇಕು, ಒಂದು ವೇಳೆ ಅವರ ಪಾತ್ರ ಇದರಲ್ಲಿಲ್ಲ ಎಂಬುದು ಬಹಿರಂಗಗೊಂಡರೆ ಅವರಿಗೆ ಒಳ್ಳೆಯದಾಗಲಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು: ಮೇ 10 ರಿಂದ ಸಂಡೆ ಬಜಾರ್ ರದ್ದು
ಕುಮಾರಸ್ವಾಮಿ ಡಿಸಿಗೆ ಬೆದರಿಕೆ ಹಾಕಿದ್ದರು: ಯಡಿಯೂರಪ್ಪ
ಆಗಸ್ಟ್‌ನೊಳಗೆ ಬಿಬಿಎಂಪಿ ಚುನಾವಣೆ: ಯಡಿಯೂರಪ್ಪ
ಕೈ ಕಡಿಯಿರಿ ಹೇಳಿಕೆ: ಕಾಗೋಡು ತಿಮ್ಮಪ್ಪಗೆ ಜಾಮೀನು ಮಂಜೂರು
ದೂರು ವಾಪಸ್ ಪಡೆಯಲು ಶಾಸಕ ರಾಜು ಧರಣಿ
ಗಣಿ: ಗಡಿ ಸಮೀಕ್ಷೆಗೆ 'ಸುಪ್ರೀಂ' ಆರು ವಾರ ಗಡುವು