ನಾದಿನಿಯನ್ನು ಕೆಣಕಿದ್ದನ್ನು ಪ್ರಶ್ನಿಸಿದ ಭಾವನನ್ನೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಲಾಸಿಪಾಳ್ಯ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ರಂ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದ ಮೇಲೆ ಧರ್ಮಪುರಿ ಜಿಲ್ಲೆ ಹೊಸೂರು ತಾಲೂಕು ಬಾಗನಹಟ್ಟಿ ಗ್ರಾಮದ ನಾಗ ಅಲಿಯಾಸ್ ಅಮರೇಶ್(21), ಚನ್ನರಾಯಪಟ್ಟಣದ ಜಪಾನ್ ಶಿವ(19) ಎಂಬಿಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಏಪ್ರಿಲ್ 28ರಂದು ರಾತ್ರಿ ಕಲಾಸಿಪಾಳ್ಯ ಮುಖ್ಯ ರಸ್ತೆಯ ನ್ಯೂಗ್ರಾಂಡ್ ಹೋಟೆಲ್ ಮುಂಭಾಗದ ಫುಟ್ಪಾತ್ನಲ್ಲಿ ಈ ಘಟನೆ ನಡೆದಿತ್ತು. ಕೊಲೆಯಾದ ಕುಳ್ಳಂ ಅಕ್ರಮ ಪತ್ನಿ ಸುರಯಾ, ನಾದಿನಿಯರಾದ ಪರಾನಾ, ಆಯೇಷಾರ ಜತೆ ನಡೆದುಕೊಂಡು ಹೋಗುವಾಗ ಎದುರುಗಡೆಯಿಂದ ಬಂದ ಆರೋಪಿ ನಾಗ ಮತ್ತು ಶಿವ ಮಹಿಳೆಯರನ್ನು ಕೆಣಕಿದ್ದರು. ಇದನ್ನು ಪ್ರತಿಭಟಿಸಿದ ಅಕ್ರಂನೊಂದಿಗೆ ಆರೋಪಿಗಳು ಜಗಳ ಮಾಡಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಅಕ್ರಂ ಸಾವನ್ನಪ್ಪಿದ್ದ. |