ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುಷ್ಕರಕ್ಕೆ ಕಾರಣ ಕೊಡಿ: ವೈದ್ಯರಿಗೆ ನೋಟಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷ್ಕರಕ್ಕೆ ಕಾರಣ ಕೊಡಿ: ವೈದ್ಯರಿಗೆ ನೋಟಿಸ್
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಕಿರಿಯ ವೈದ್ಯರಿಗೆ ಮುಷ್ಕರ ನಡೆಸಿದ್ದರ ಬಗ್ಗೆ ಕಾರಣ ಕೊಡಿ ಎಂದು ವಿವರಣೆ ಕೇಳಿ ರಾಜ್ಯ ಸರ್ಕಾರ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಮುಷ್ಕರ ನಡೆಸಿದ್ದರ ಬಗ್ಗೆ ಕಾರಣ ನೀಡಿ ಎಂದು ನೋಟಿಸ್ ಜಾರಿಗೊಳಿಸಿದ್ದು, ಅವರು ನೀಡುವ ವಿವರಣೆ ನಂತರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಇಂದು ಹೈಕೋರ್ಟ್‌ಗೆ ಮಾಹಿತಿ ನೀಡಿದರು.

ಕಿರಿಯ ವೈದ್ಯರ ಮುಷ್ಕರ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ಮುಂದುವರಿದಿದ್ದು, ಹಾರ್ನಳ್ಳಿ ನ್ಯಾಯಾಲಯಕ್ಕೆ ವಿವರಣೆ ನೀಡಿದ್ದು, ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಮೇ 7ಕ್ಕೆ ಮುಂದೂಡಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಿರಿಯ ವೈದ್ಯರು ರಾಜ್ಯಾದ್ಯಂತ ಮೂರು ದಿನಗಳ ಕಾಲ ಮುಷ್ಕರ ನಡೆಸಿದ್ದರು. ಇದರಿಂದ ರೋಗಿಗಳು ತೀವ್ರ ತೆರನಾಗಿ ಪರದಾಡುವಂತಾಗಿತ್ತು. ಕಿರಿಯ ವೈದ್ಯರ ಮುಷ್ಕರ ಕುರಿತಂತೆ ಸೋಮವಾರ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ತಮ್ಮ ನಿವಾಸದಲ್ಲಿ ತ್ವರಿತವಾಗಿ ವಿಚಾರಣೆ ನಡೆಸಿ, ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಿದ್ದರು. ಅಲ್ಲದೇ ಕಿರಿಯ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕ್ಯಾತಮಾರನಹಳ್ಳಿ ಗಲಭೆ: ಬಂಧಿತರ ಬಿಡುಗಡೆಗೆ ಕೆಎಫ್‌ಡಿ ಪ್ರತಿಭಟನೆ
ಅಂಬೇಡ್ಕರ್‌ಗೆ ಅವಹೇಳನ: ಗಂಗಾವತಿ ಬಂದ್
ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ವಿವರ ನೀಡಿ: ಬಿಜೆಪಿ
ಮೇ 9: ವೆಬ್‌ದುನಿಯಾದಲ್ಲಿ ಪಿಯುಸಿ ಫಲಿತಾಂಶ
ಬಂಗಾರಪ್ಪ ಮರಕೋತಿ ರಾಜಕೀಯ ಮಾಡ್ತಾರೆ: ಸಂಗಮೇಶ್
ಸಚಿವರ ನಿವಾಸ ಅವ್ಯವಹಾರ: ತನಿಖೆಗೆ ಆದೇಶ