ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೈತರ ಸಭೆ-ತಾಳ್ಮೆ ಕಳೆದುಕೊಂಡ ಅನಿತಾಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರ ಸಭೆ-ತಾಳ್ಮೆ ಕಳೆದುಕೊಂಡ ಅನಿತಾಕುಮಾರಸ್ವಾಮಿ
ನಾವೆಲ್ಲ ಸತ್ತ ಮೇಲೆ ಬರುತ್ತೀರಾ? ರೈತರ ಪ್ರಶ್ನೆ
ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾದ ರೈತ ಸಂತ್ರಸ್ಥರ ಸಭೆ ಆರಂಭಕ್ಕೂ ಮುನ್ನ ರೈತರ ಹಾಗೂ ಶಾಸಕಿ ಅನಿತಾ ನಡುವೆ ವಾಗ್ವಾದ ನಡೆದು ತಾಳ್ಮೆ ಕಳೆದುಕೊಂಡು ಸಭೆಯಿಂದ ಹೊರನಡೆದ ಘಟನೆ ಮಧುಗಿರಿಯಲ್ಲಿ ನಡೆದಿದೆ.

ಮಣ್ಣಿನ ಮಕ್ಕಳೆಂದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತೀರಿ. ಆದರೆ ಮಳೆಯಿಂದಾಗಿ ಹಾನಿಗೊಳಗಾದ ರೈತರ ಕೂಗು ನಿಮಗೆ ಕೇಳಿಸುವುದಿಲ್ಲವೇ? ನಾವೆಲ್ಲ ಸತ್ತ ಮೇಲೆ ಬರುತ್ತೀರಾ? ಎಂಬ ರೈತರ ಪ್ರಶ್ನೆಗೆ, ನಾನು ಬಂದು ಮಳೆ ನಿಲ್ಲಿಸಲು ಸಾಧ್ಯವಾಗುತ್ತಾ?ಎಂಬುದು ಅನಿತಾ ತಿರುಗೇಟು. ಈಗ ಇಲ್ಲಿಗೆ ಬಂದಿರುವುದು ಪರಿಹಾರ ದೊರಕಿಸಲು ಅದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಮಜಾಯಿಷಿ ನೀಡಿದರು.

ನಂತರ ತಾಲೂಕು ಜೆಡಿಎಸ್ ಅಧ್ಯಕ್ಷರಾದ ತುಂಗೋಟಿ ರಾಮಣ್ಣ ಅವರು ರೈತರನ್ನು ಸಮಾಧಾನ ಪಡಿಸಿ ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡು, ಕೇರಳಕ್ಕೆ ತೆರಳಿದ್ದರಿಂದ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ನಂತರ ಪರಿಸ್ಥಿತಿ ತಿಳಿಯಾಗಿ ಶಾಸಕಿ ಅನಿತಾ ಉಪಸ್ಥಿತಿಯಲ್ಲಿ ಸಭೆ ಶಾಂತವಾಗಿ ನಡೆಯಿತು.

ಈ ಘಟನೆಯನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಅನಿತಾ ಅವರು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಈ ಸಂದರ್ಭದಲ್ಲಿ ರೈತರಿಗೆ ಭರವಸೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆದಾಯದಲ್ಲಿ 8024ಕೋಟಿ ರೂ.ಕೊರತೆ: ಯಡಿಯೂರಪ್ಪ
ಆಯುಷ್ ನಿರ್ದೇಶಕ ಡಾ.ಪ್ರಕಾಶ್ 'ನಿರ್ದೋಷಿ'
ವೈದ್ಯರ ಕರ್ತವ್ಯ ನಿರ್ವಹಣೆಗೆ ತಡೆ ಇಲ್ಲ: ಹೈಕೋರ್ಟ್
ಕೊಂಡಜ್ಜಿ ಸಾವಿಗೆ ಹೃದ್ರೋಗ ಕಾರಣ: ರೇಣುಕಾಚಾರ್ಯ
ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ: ಸಿಎಂ
ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ