ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾದ ರೈತ ಸಂತ್ರಸ್ಥರ ಸಭೆ ಆರಂಭಕ್ಕೂ ಮುನ್ನ ರೈತರ ಹಾಗೂ ಶಾಸಕಿ ಅನಿತಾ ನಡುವೆ ವಾಗ್ವಾದ ನಡೆದು ತಾಳ್ಮೆ ಕಳೆದುಕೊಂಡು ಸಭೆಯಿಂದ ಹೊರನಡೆದ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಮಣ್ಣಿನ ಮಕ್ಕಳೆಂದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತೀರಿ. ಆದರೆ ಮಳೆಯಿಂದಾಗಿ ಹಾನಿಗೊಳಗಾದ ರೈತರ ಕೂಗು ನಿಮಗೆ ಕೇಳಿಸುವುದಿಲ್ಲವೇ? ನಾವೆಲ್ಲ ಸತ್ತ ಮೇಲೆ ಬರುತ್ತೀರಾ? ಎಂಬ ರೈತರ ಪ್ರಶ್ನೆಗೆ, ನಾನು ಬಂದು ಮಳೆ ನಿಲ್ಲಿಸಲು ಸಾಧ್ಯವಾಗುತ್ತಾ?ಎಂಬುದು ಅನಿತಾ ತಿರುಗೇಟು. ಈಗ ಇಲ್ಲಿಗೆ ಬಂದಿರುವುದು ಪರಿಹಾರ ದೊರಕಿಸಲು ಅದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಮಜಾಯಿಷಿ ನೀಡಿದರು.
ನಂತರ ತಾಲೂಕು ಜೆಡಿಎಸ್ ಅಧ್ಯಕ್ಷರಾದ ತುಂಗೋಟಿ ರಾಮಣ್ಣ ಅವರು ರೈತರನ್ನು ಸಮಾಧಾನ ಪಡಿಸಿ ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡು, ಕೇರಳಕ್ಕೆ ತೆರಳಿದ್ದರಿಂದ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ನಂತರ ಪರಿಸ್ಥಿತಿ ತಿಳಿಯಾಗಿ ಶಾಸಕಿ ಅನಿತಾ ಉಪಸ್ಥಿತಿಯಲ್ಲಿ ಸಭೆ ಶಾಂತವಾಗಿ ನಡೆಯಿತು.
ಈ ಘಟನೆಯನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಅನಿತಾ ಅವರು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಈ ಸಂದರ್ಭದಲ್ಲಿ ರೈತರಿಗೆ ಭರವಸೆ ನೀಡಿದರು. |