ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲಾರಿ-ಬೈಕ್ ಡಿಕ್ಕಿ: ಪಿಯುಸಿ ವಿದ್ಯಾರ್ಥಿನಿ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾರಿ-ಬೈಕ್ ಡಿಕ್ಕಿ: ಪಿಯುಸಿ ವಿದ್ಯಾರ್ಥಿನಿ ಬಲಿ
ಸಿಇಟಿ ಪರೀಕ್ಷೆ ಬರೆಯಲು ಅಣ್ಣನ ಬೈಕ್‌ನಲ್ಲಿ ಕಾಲೇಜ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮರಳು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಗಂಗಮ್ಮನಗುಡಿ ಸಮೀಪ ಲಕ್ಷ್ಮೀಪುರ ಕ್ರಾಸ್ ಬಳಿ ಇಂದು ಬೆಳಿಗ್ಗೆ ಈ ದುರ್ಘಟನೆ ನಡೆದಿದ್ದು, ಸಂಭ್ರಮ ಕಾಲೇಜ್ ವಿದ್ಯಾರ್ಥಿನಿ ಕಾರ್ತಿಕಾ.ಎನ್ (19) ಸಾವನ್ನಪ್ಪಿದ್ದಾಳೆ.

ಅಬ್ಬಿಗೆರೆ ನಿವಾಸಿಯಾದ ಕಾರ್ತಿಕಾ ಎನ್.ಅಣ್ಣನ ಬೈಕ್‌‌ನ ಹಿಂದೆ ಕುಳಿತು ಹೋಗುತ್ತಿದ್ದಾಗ ಮರಳು ತುಂಬಿದ ಲಾರಿ ವೇಗವಾಗಿ ಬಂದು ಹೊಡೆದ ಪರಿಣಾಮ, ಆಕೆಯ ಹೊಟ್ಟೆಯ ಮೇಲೆ ಲಾರಿ ಚಲಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಳು. ಬೈಕ್ ಸವಾರನಾದ ಸಹೋದರ ಕೂಡ ಸಣ್ಣ-ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.

ಘಟನೆ ನಡೆದ ಕೂಡಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಮಲ್ಲೇಶ್ವರಂ ಸಂಚಾರ ವಿಭಾಗದ ಎಸಿಪಿ ಗಂಗಾಧರ, ಯಶವಂತಪುರ ಸಂಚಾರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿರುವುದಾಗಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೋಲಿಬಾರ್ ಪ್ರಕರಣ: ಎಚ್.ಕೆ.ಪಾಟೀಲ್‌ಗೆ ಸಮನ್ಸ್ ಜಾರಿ
ಶೃಂಗೇರಿ: ಐವರು ನಕ್ಸಲ್ ಬೆಂಬಲಿಗರ ಸೆರೆ
ಅರ್ಕಾವತಿ ವಿವಾದ: ರೈತರಿಬ್ಬರು ಆತ್ಮಹತ್ಯೆಗೆ ಯತ್ನ
ರೈತರ ಸಭೆ-ತಾಳ್ಮೆ ಕಳೆದುಕೊಂಡ ಅನಿತಾಕುಮಾರಸ್ವಾಮಿ
ಆದಾಯದಲ್ಲಿ 8024ಕೋಟಿ ರೂ.ಕೊರತೆ: ಯಡಿಯೂರಪ್ಪ
ಆಯುಷ್ ನಿರ್ದೇಶಕ ಡಾ.ಪ್ರಕಾಶ್ 'ನಿರ್ದೋಷಿ'