ಸಿಇಟಿ ಪರೀಕ್ಷೆ ಬರೆಯಲು ಅಣ್ಣನ ಬೈಕ್ನಲ್ಲಿ ಕಾಲೇಜ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮರಳು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಗಂಗಮ್ಮನಗುಡಿ ಸಮೀಪ ಲಕ್ಷ್ಮೀಪುರ ಕ್ರಾಸ್ ಬಳಿ ಇಂದು ಬೆಳಿಗ್ಗೆ ಈ ದುರ್ಘಟನೆ ನಡೆದಿದ್ದು, ಸಂಭ್ರಮ ಕಾಲೇಜ್ ವಿದ್ಯಾರ್ಥಿನಿ ಕಾರ್ತಿಕಾ.ಎನ್ (19) ಸಾವನ್ನಪ್ಪಿದ್ದಾಳೆ.
ಅಬ್ಬಿಗೆರೆ ನಿವಾಸಿಯಾದ ಕಾರ್ತಿಕಾ ಎನ್.ಅಣ್ಣನ ಬೈಕ್ನ ಹಿಂದೆ ಕುಳಿತು ಹೋಗುತ್ತಿದ್ದಾಗ ಮರಳು ತುಂಬಿದ ಲಾರಿ ವೇಗವಾಗಿ ಬಂದು ಹೊಡೆದ ಪರಿಣಾಮ, ಆಕೆಯ ಹೊಟ್ಟೆಯ ಮೇಲೆ ಲಾರಿ ಚಲಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಳು. ಬೈಕ್ ಸವಾರನಾದ ಸಹೋದರ ಕೂಡ ಸಣ್ಣ-ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಕೂಡಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಮಲ್ಲೇಶ್ವರಂ ಸಂಚಾರ ವಿಭಾಗದ ಎಸಿಪಿ ಗಂಗಾಧರ, ಯಶವಂತಪುರ ಸಂಚಾರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿರುವುದಾಗಿ ತಿಳಿಸಿದ್ದಾರೆ. |