ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತೀರ್ಥಹಳ್ಳಿ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೀರ್ಥಹಳ್ಳಿ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ
ಅಕ್ರಮವಾಗಿ ಮರಳು ಸಾಗಣಿಕೆ ಮಾಡಲು ಗಣಿ ಮಾಲೀಕರಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿ ತಹಸೀಲ್ದಾರ್ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.

ಲೋಕಾಯುಕ್ತ ಬಲೆಗೆ ಬಿದ್ದವರು ತೀರ್ಥಹಳ್ಳಿ ತಹಸೀಲ್ದಾರ್ ಕೇಶವರಾಜ್. ತೀರ್ಥಹಳ್ಳಿ ಸುತ್ತಮುತ್ತ ಮರಳು ಸಾಗಾಣೆ ನಡೆಸುವುದಕ್ಕೆ ಅನುಮತಿ ನೀಡುವ ಸಲುವಾಗಿ ತಮ್ಮ ಮನೆಯಲ್ಲಿಯೇ 10 ಸಾವಿರ ರೂ. ಪಡೆಯುತ್ತಿದ್ದಾಗ ಕೇಶವರಾಜ್ ಲೋಕಾಯುಕ್ತ ಸಬ್ ಇನ್ಸ್‌‌ಪೆಕ್ಟರ್ ಕರಿ ಬಸವಗೌಡ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.

ಕಳೆದ ಆರು ತಿಂಗಳ ಹಿಂದಷ್ಟೆ ಕೇಶವರಾಜ್ ತೀರ್ಥಹಳ್ಳಿಗೆ ಆಗಮಿಸಿದ್ದರು. ಈ ಹಿಂದೆ ಅವರು ಹಾವೇರಿಯಲ್ಲಿ ಸೇವೆ ಸಲ್ಲಿಸಿದ್ದರು. ಕಾಂತ್‌‌ರಾಜ್ ಭಾರತೀಯ ಸೇನಾ ಪಡೆಯಲ್ಲೂ ಕೆಲ ಕಾಲ ಸೇವೆ ಸಲ್ಲಿಸಿದ್ದರು.

ತೀರ್ಥಹಳ್ಳಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣಿ ಹಲವು ವರ್ಷಗಳಿಂದ ವ್ಯಾಪಕವಾಗಿ ನಡೆಯುತ್ತಿದೆ ಎಂದು ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್ ಕರಿ ಬಸವಗೌಡ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರಿನಲ್ಲಿ ಎಚ್‌1ಎನ್‌1 ಸೋಂಕು ಪತ್ತೆ
ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಂಪ್ಯೂಟರ್,ಪೀಠೋಪಕರಣ ಧ್ವಂಸ
'ಅರ್ಕಾವತಿ' ವಿವಾದಕ್ಕೆ ಎಚ್‌ಡಿಕೆ ಸರ್ಕಾರ ಕಾರಣ: ಸಿಎಂ
ಐಟಿ ಕಂಪೆನಿಗಳಿಗೆ ಸಿಎಂ ನೆರವಿನ ಭರವಸೆ
ಲೆಕ್ಕಪತ್ರ ವಿವಾದ: ಕೆಎಂಎಫ್ ಅಧ್ಯಕ್ಷ ರೇವಣ್ಣಗೆ ಮುಖಭಂಗ
ಇಂಗ್ಲೀಷ್ ಭಾಷೆ ವಿವಾದ: ಸುಪ್ರೀಂಗೆ ಮೇಲ್ಮನವಿ