ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸತ್ಯವನ್ನು ಮರೆಮಾಚಿ, ಅಪಾರ್ಥ ಬರುವಂತೆ ಮಾತನಾಡುತ್ತ ಜನರನ್ನ ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಪ್ರತಿಯೊಂದು ವಿಷಯಕ್ಕೂ ವಾಗ್ದಾಳಿ ನಡೆಸುತ್ತಿರುವ ಕುಮಾರಸ್ವಾಮಿ ಅವರಿಗೆ ಮೇ 16ರಂದು ಬರುವ ಫಲಿತಾಂಶವೇ ಉತ್ತರ ಕೊಡಲಿದೆ ಎಂದು ತಿರುಗೇಟು ನೀಡಿದರು.
ಸಾವಯವ ಕೃಷಿ ಮಿಷನ್ ಮೂಲಕ ಆರ್ಎಸ್ಎಸ್ ಸಂಘಟನೆ ಬಲಪಡಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರ ಬಗ್ಗೆ ಪ್ರಶ್ನಿಸಿದಾಗ, ಸಾವಯವ ಕೃಷಿ ಮಿಷನ್ ಮುಖ್ಯಸ್ಥ ಆನಂದ್ ಮಾಡಿರುವ ಕೆಲಸವನ್ನು ಯಾರಾದರೂ ಶ್ಲಾಘಿಸಲೇಬೇಕು ಎಂದು ಹೇಳಿದರು. |