ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಚೇರಿಯಲ್ಲಿ ಕುಳಿತುಕೊಳ್ಳಿ: ಸಚಿವರಿಗೆ ಸಿಎಂ ತಾಕೀತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚೇರಿಯಲ್ಲಿ ಕುಳಿತುಕೊಳ್ಳಿ: ಸಚಿವರಿಗೆ ಸಿಎಂ ತಾಕೀತು
NRB
ತಿಂಗಳುಗಟ್ಟಲೆ ವಿಧಾನಸೌಧದ ಕಚೇರಿಗಳ ಮುಖವನ್ನೇ ನೋಡದ ಸಚಿವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಲ್ಲಾ ಸಚಿವರು ಕಡ್ಡಾಯವಾಗಿ ವಾರದಲ್ಲಿ ಮೂರು ದಿನ ವಿಧಾನಸೌಧದ ಕಚೇರಿಗಳಲ್ಲಿ ಇರಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ.

ಕೆಲವು ಸಚಿವರು ಕಚೇರಿಗೆ ಬರುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ. ಈ ರೀತಿಯಾದರೆ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಲು ನಿಧಾನವಾಗುತ್ತದೆ. ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರೆನ್ನಲಾಗಿದೆ.

ಎಲ್ಲಾ ಸಚಿವರು ವಾರದಲ್ಲಿ ಮೂರು ಅಥವಾ ನಾಲ್ಕು ದಿನಗಳು ಕಡ್ಡಾಯವಾಗಿ ಕಚೇರಿಯಲ್ಲಿರಬೇಕು. ವಾರಕ್ಕೆ ಒಮ್ಮೆ ತಮ್ಮ ತಮ್ಮ ಇಲಾಖೆಗಳ ಪ್ರಗತಿ ಪರೀಶೀಲನೆಯನ್ನು ಕಡ್ಡಾಯವಾಗಿ ಮಾಡಬೇಕು. ವಾರದ ಕೊನೆಯಲ್ಲಿ ಕ್ಷೇತ್ರಗಳಲ್ಲಿ ಪ್ರವಾಸ ಮಾಡಬೇಕು. ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡಿ ಇಲಾಖೆಯ ಯೋಜನೆಗಳ ಅನುಷ್ಠಾನ ತೀವ್ರಗೊಳಿಸಬೇಕು ಎಂದು ಸೂಚಿಸಿದರೆನ್ನಲಾಗಿದೆ.

ಜನತೆ ಆಶೀರ್ವಾದ ಮಾಡಿದ್ದರಿಂದ ನಾವು ಅಧಿಕಾರದಲ್ಲಿದ್ದೇವೆ. ಅವರ ಋಣ ತೀರಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿ ಎಂದು ಯಡಿಯೂರಪ್ಪ ಸೂಚಿಸಿದ್ದಾರೆಂದು ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಯುಸಿ ಫಲಿತಾಂಶ ವೆಬ್‌ದುನಿಯಾದಲ್ಲಿ ನಿರೀಕ್ಷಿಸಿ
ಬಿಬಿಎಂಪಿ ಚುನಾವಣೆ ನಡೆಯದಿದ್ದರೆ ಹೋರಾಟ: ಕಾಂಗ್ರೆಸ್
ಘರ್ಷಣೆ ಪ್ರಕರಣ: ಎಸ್‌ಐ, ಕಾನ್‌ಸ್ಟೇಬಲ್ ವರ್ಗಾವಣೆ
ಸರ್ಕಾರಿ ಜಮೀನು ಪರಭಾರೆ ತಡೆಗೆ ಸಂಪುಟ ನಿರ್ಧಾರ
ಬೆಂಗಳೂರು: ಅಮೆರಿಕ ಕಂಪನಿಗಳಿಗೆ ಬೀಗ!
ಮೇ 16ರ ಫಲಿತಾಂಶ ಎಚ್‌ಡಿಕೆ ಆರೋಪಕ್ಕೆ ಉತ್ತರ: ಸಿಎಂ