ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಗತ್ಯವಸ್ತುಗಳ ಬೆಲೆ ನಿಯಂತ್ರಣಕ್ಕಾಗಿ ಸಮಿತಿ: ಹಾಲಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಗತ್ಯವಸ್ತುಗಳ ಬೆಲೆ ನಿಯಂತ್ರಣಕ್ಕಾಗಿ ಸಮಿತಿ: ಹಾಲಪ್ಪ
ರಾಜ್ಯ ಮುಖ್ಯಕಾರ್ಯದರ್ಶಿ ನೇತೃತ್ವದ ಆಗತ್ಯವಸ್ತುಗಳ ಬೆಲೆ ನಿಯಂತ್ರಣ ಸಮಿತಿಯು ಸದ್ಯವೇ ಸಭೆ ಸೇರಿ ಬೆಲೆ ನಿಯಂತ್ರಣದ ಕುರಿತು ಚರ್ಚಿಸಲಿದೆ ಎಂಬುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಲಪ್ಪ ಶುಕ್ರವಾರ ತಿಳಿಸಿದ್ದಾರೆ.

ಅಗತ್ಯವಸ್ತುಗಳ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಹೊಣೆ ಅಲ್ಲ, ಇದು ಜಾಗತಿಕರಣದ ಪ್ರಭಾವ ಎಂದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಬೆಲೆಏರಿಕೆ ತಡೆಯುವುದು ಅನಿವಾರ್ಯವಾಗಿರುವ ಹಿನ್ನೆಯಲ್ಲಿ, ಸರ್ಕಾರಕ್ಕೆ ಸೂಕ್ತ ಸಲಹೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಮಿತಿಯ ಸಂಚಾಲಕರಾಗಿ ಆಹಾರ ಇಲಾಖೆಯ ಆಯುಕ್ತರು ಕಾರ್ಯನಿರ್ವಹಿಸಿದರೆ, ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೃಷಿ ಆಯುಕ್ತರು, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರ ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರತಿ ಮೂರು ತಿಂಗಳಿಗೆ ಸಭೆಸೇರಲಿರುವ ಈ ಸಮಿತಿ ಆಗತ್ಯ ವಸ್ತುಗಳ ಬೆಲೆಗಳ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಸಚಿವ ಹಾಲಪ್ಪ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಚೇರಿಯಲ್ಲಿ ಕುಳಿತುಕೊಳ್ಳಿ: ಸಚಿವರಿಗೆ ಸಿಎಂ ತಾಕೀತು
ಪಿಯುಸಿ ಫಲಿತಾಂಶ ವೆಬ್‌ದುನಿಯಾದಲ್ಲಿ ನಿರೀಕ್ಷಿಸಿ
ಬಿಬಿಎಂಪಿ ಚುನಾವಣೆ ನಡೆಯದಿದ್ದರೆ ಹೋರಾಟ: ಕಾಂಗ್ರೆಸ್
ಘರ್ಷಣೆ ಪ್ರಕರಣ: ಎಸ್‌ಐ, ಕಾನ್‌ಸ್ಟೇಬಲ್ ವರ್ಗಾವಣೆ
ಸರ್ಕಾರಿ ಜಮೀನು ಪರಭಾರೆ ತಡೆಗೆ ಸಂಪುಟ ನಿರ್ಧಾರ
ಬೆಂಗಳೂರು: ಅಮೆರಿಕ ಕಂಪನಿಗಳಿಗೆ ಬೀಗ!