ಹಿಂದುತ್ವದ ಪ್ರತಿಪಾದಕರಿಂದ ಮಾತ್ರ ಈ ದೇಶದ ರಕ್ಷಣೆ ಸಾಧ್ಯ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಹೇಳಿದ್ದಾರೆ.
ಹಿಂದು ಸಂರಕ್ಷಣೆಗಾಗಿ ಧರ್ಮ ಜಾಗೃತಿ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕ್ರಮಣ ಕಾಲದಲ್ಲಿ ಇರುವ ದೇಶದ ಆಡಳಿತ ಚುಕ್ಕಾಣಿಯನ್ನು ಹಿಂದುತ್ವ ಪ್ರತಿಪಾದಿಸುವ ವ್ಯಕ್ತಿಗಳಿಗೆ ನೀಡಬೇಕು. ಇದರಿಂದ ಈ ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ದೇಶದಲ್ಲಿ ಸಮಷ್ಠಿಯ ಚಿಂತನೆ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾದ ಅವಕಾಶ ಸಿಗಬೇಕು. ಸುಖ, ಸಮೃದ್ದಿ, ನೆಮ್ಮದಿ ಸಿಗಬೇಕು.ಈ ಹಿನ್ನೆಲೆಯಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹ ಎಂದರು.
ದೇಶದ ಚುಕ್ಕಾಣಿಯನ್ನು ಹಿಂದುತ್ವ ಪ್ರತಿಪಾದಕರು ಹಿಡಿಯಬೇಕೆಂದ ಅವರು, ಕೇಂದ್ರದಲ್ಲಿ ಇಂಥ ಸರ್ಕಾರ ಪ್ರತಿಷ್ಠಾಪಿತವಾಗಬೇಕು ಎಂದರು. |