ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಲೇಜುಗಳ ಶೂನ್ಯ ಸಂಪಾದನೆ: ತನಿಖೆಗೆ ತಜ್ಞರ ತಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಲೇಜುಗಳ ಶೂನ್ಯ ಸಂಪಾದನೆ: ತನಿಖೆಗೆ ತಜ್ಞರ ತಂಡ
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೂನ್ಯ ಸಂಪಾದನೆ ಮಾಡಿರುವ ರಾಜ್ಯದ 74 ಕಾಲೇಜುಗಳಿಗೆ ತಜ್ಞರ ತಂಡಗಳನ್ನು ಕಳಿಸಿ ವರದಿ ಪಡೆದುಕೊಂಡ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಒಟ್ಟು 28 ಸರ್ಕಾರಿ ಕಾಲೇಜುಗಳು ಸೇರಿದಂತೆ 74 ಪಿಯು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ತೇರ್ಗಡೆ ಹೊಂದಿಲ್ಲ. ಈ ವಿಚಾರವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತಜ್ಞರ ತಂಡಗಳನ್ನು ಇಂತಹ ಕಾಲೇಜುಗಳಿಗೆ ಕಳಿಸಿ ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಪಡೆದುಕೊಳ್ಳಲಾಗುವುದು ಎಂದು ಇಲಾಖೆ ಆಯುಕ್ತ ಎಸ್.ಜಿ.ಹೆಗಡೆ ತಿಳಿಸಿದ್ದಾರೆ.

ಇಲಾಖೆ ಕಳಿಸಿಕೊಡುವ ತಂಡಗಳು ಸಂಬಂಧಪಟ್ಟ ಕಾಲೇಜುಗಳಿಗೆ ತೆರಳಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ ವಸ್ತುಸ್ಥಿತಿ ಅರಿತು ವರದಿ ಮಾಡಲಿವೆ. ಈ ಕಳಪೆ ಫಲಿತಾಂಶಕ್ಕೆ ಕಾರಣ ಏನೆಂದು ಪತ್ತೆ ಮಾಡಿದ ನಂತರ ಕ್ರಮ ಏನೆಂದು ನಿರ್ಧರಿಸಲಾಗುವುದು ಎಂದರು.

ಕಳೆದ ವರ್ಷ ಫಲಿತಾಂಶ ಬಹಳಷ್ಟು ಕುಸಿದಿದ್ದ ಹಿನ್ನೆಲೆಯಲ್ಲಿ ಉಪನ್ಯಾಸಕರ ಕೊರತೆಯನ್ನು ನಿವಾರಿಸಲಾಗಿತ್ತು. ಸುಮಾರು ಎರಡೂವರೆ ಸಾವಿರ ಉಪನ್ಯಾಸಕ ಹುದ್ದೆ ಖಾಲಿ ಇದ್ದ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ನೇಮಕದ ಮೂಲಕ ಈ ಕೊರತೆ ನಿವಾರಿಸಲಾಗಿತ್ತು. ಆದರೂ ಫಲಿತಾಂಶ ಸುಧಾರಿಸದ ಹಿನ್ನೆಲೆಯಲ್ಲಿ ಕಾರಣಗಳನ್ನು ಪತ್ತೆ ಹಚ್ಚಲು ಇಲಾಖೆ ಮುಂದಾಗಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಡ್ತಿ ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರ
ರಾಜ್ಯಕ್ಕೆ ಕೋಕಾ ಅಗತ್ಯವಿಲ್ಲ: ಖರ್ಗೆ
ಕನ್ನಡಕ್ಕೆಶಾಸ್ತ್ರೀಯ ಸ್ಥಾನ: ಕೇಂದ್ರದಿಂದ ಅಧಿಕೃತ
ಪಿಯುಸಿ: ಶೇ.43, ವಿದ್ಯಾರ್ಥಿನಿಯರೇ ಮುಂದು
ಶಿರಾಡಿ ಘಾಟ್ ದುರಸ್ತಿ ಪೂರ್ಣ
ಅಮೆರಿಕಾ ಮೇಲೆ ಒತ್ತಡ ತನ್ನಿ: ದೇಶಪಾಂಡೆ