ಮುಂಬರುವ ವರ್ಷ ರಾಜ್ಯದ ವಿದ್ಯುತ್ ಬೇಡಿಕೆಯ ಪ್ರಮಾಣ 145ಮಿಲಿಯನ್ ಯೂನಿಟ್ಗಳಿಗೇರುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಕಾರ್ಯತಂತ್ರವನ್ನು ರೂಪಿಸಲು ಮಹತ್ವದ ಸಂಪುಟ ಉಪಸಮಿತಿ ಸಭೆ ನಡೆಸುವುದಾಗಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷ ವಿದ್ಯುತ್ ಬೇಡಿಕೆಯ ಪ್ರಮಾಣ 142ಮಿಲಿಯನ್ ಯೂನಿಟ್ಗಳಿಗೇರಿದ ಹಿನ್ನೆಲೆಯಲ್ಲಿ ಮುಂದಿನ ವರ್ಷದ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹೀಗಾಗಿಯೇ ವಿದ್ಯುತ್ ಪರಿಸ್ಥಿತಿಯನ್ನು ಅವಲೋಕಿಸಲು ನೇಮಿಸಲಾದ ಸಂಪುಟ ಉಪಸಮಿತಿ ಸಭೆಯನ್ನು ಮೇ 13ರಂದು ನಡೆಸಲಾಗುವುದು ಎಂದರು. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಸದ್ಯಕ್ಕೆ ಪ್ರತಿನಿತ್ಯ 112 ಮಿಲಿಯನ್ ಯೂನಿಟ್ಗಳಷ್ಟಿದೆ ಎಂದು ವಿವರಿಸಿದರು.
ಮೇನಲ್ಲಿ ಬೇಡಿಕೆ ಪ್ರಮಾಣ ನೂರಾ ನಲವತ್ತು ಮಿಲಿಯನ್ ಯೂನಿಟ್ಗಳಿಗೇರಬಹುದು ಎಂಬ ನಿರೀಕ್ಷೆ ಇತ್ತಾದರೂ ಮಳೆಯಿಂದಾಗಿ ಅಂತಹ ಸ್ಥಿತಿ ತುಂಬ ಕಾಲ ಉಳಿಯಲಿಲ್ಲ. ಹಮಾಮಾನ ತಜ್ಞರ ಪ್ರಕಾರ ಸದ್ಯದಲ್ಲೇ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದ್ದು ಸೂಕ್ತ ಕಾಲದಲ್ಲಿ ಮಳೆ ಬಂದರೆ ಈ ವರ್ಷದ ಸಮಸ್ಯೆ ಬಗೆ ಹರಿದಂತೆ ಎಂದು ಹೇಳಿದರು. |