ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಂಬರೀಷ್ ಅಭಿಮಾನಿಗಳಿಂದ ಜಗ್ಗೇಶ್ ಪ್ರತಿಕೃತಿ ದಹನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಬರೀಷ್ ಅಭಿಮಾನಿಗಳಿಂದ ಜಗ್ಗೇಶ್ ಪ್ರತಿಕೃತಿ ದಹನ
ಸಂಸದ ಹಾಗೂ ನಟ ಅಂಬರೀಶ್ ಅವರ ಬಗ್ಗೆ ಜಗ್ಗೇಶ್ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ಸೋಮವಾರ ರಾಜಾಜಿನಗರದ ಸಾಂಸ್ಕೃತಿಕ ಸಂಘ ಜಗ್ಗೇಶ್ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಿತು.

ಅಂಬರೀಶ್ ಅವರ ಮಾರ್ಗದರ್ಶನದಿಂದಲೇ ಚಿತ್ರರಂಗ ಪ್ರವೇಶಿಸಿದ ಜಗ್ಗೇಶ್, ಸ್ವಲ್ಪವೂ ಮರ್ಯಾದೆ ಕೊಡದೆ ಅಂಬರೀಶ್ ಸರ್ವೋಚ್ಚ ನಾಯಕರಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ಜಗ್ಗೇಶ್ ಅವರ ಅಹಂಕಾರದ ಪರಮಾವಧಿ ಎಂದು ಪ್ರತಿಭಟನೆ ವೇಳೆ ಅಭಿಮಾನಿಗಳು ಜಗ್ಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ತುರುವೆಕೆರೆ ಕ್ಷೇತ್ರದಲ್ಲಿ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಶಾಸಕರಾದ ಜಗ್ಗೇಶ್, ಇದೀಗ ಶಾಸಕ ಸ್ಥಾನವನ್ನೇ ಹಣಕ್ಕಾಗಿ ಮಾರಿಕೊಂಡು ಕ್ಷೇತ್ರದ ಜನತೆಗೆ ವಂಚಿಸಿದ್ದಾರೆ ಎಂದು ಕಿಡಿಕಾರಿದ ಪ್ರತಿಭಟನಾಕಾರರು ಅಂಬರೀಶ್ ಬಗ್ಗೆ ಮಾತನಾಡುವಷ್ಟು ಅರ್ಹರಲ್ಲ ಎಂದರು. ಅಂಬರೀಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಜಗ್ಗೇಶ್ ಇನ್ನು 15 ದಿನದೊಳಗೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ದೂರು ನೀಡಿ ಜಗ್ಗೇಶ್‌ಗೆ ಒಂದು ವರ್ಷಗಳ ಕಾಲಾವಧಿ ಅಭಿನಯಿಸಲು ಅವಕಾಶ ನೀಡಬಾರದು ಎಂದು ಒತ್ತಡ ಹೇರಲಾಗುವುದು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದ್ಯುತ್ ಬವಣೆ ನೀಗಿಸಲು ಶೀಘ್ರವೇ ಸಭೆ: ಈಶ್ವರಪ್ಪ
ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿಎಂ 'ವಿಶ್ರಾಂತಿ'
'ಕೋಕಾ' ಕಾಯ್ದೆ ತಿದ್ದುಪಡಿಗೆ ಡಿಕೆಶಿ ಆಕ್ರೋಶ
ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಜೆಡಿಎಸ್ ಆಗ್ರಹ
ರಾಜಧಾನಿಯಲ್ಲಿ ಗರಿಗೆದರಿದ ಬಿಬಿಎಂಪಿ ಚುನಾವಣೆ
ವಿಚ್ಛೇದನ ಪ್ರಕರಣ: ಶ್ರುತಿ ಅಧ್ಯಕ್ಷಗಾದಿಗೆ ತೊಡಕು