ನೈಸ್ ರಸ್ತೆ ಕಾಮಗಾರಿಗಾಗಿ ಗುಡಿಸಲು ತೆರವುಗೊಳಿಸಲು ಮುಂದಾದ ನೈಸ್ ಸಂಸ್ಥೆ ಅಧಿಕಾರಿಗಳೊಂದಿಗೆ ವೀರಭದ್ರ ನಗರದ ನಿವಾಸಿಗಳು ಮಾತಿನ ಚಕಮಕಿ ನಡೆಸಿ ಪರಿಹಾರ ನೀಡುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಹೊಸಕೆರೆ ಹಳ್ಳಿ ಸಮೀಪವಿರುವ ವೀರಭದ್ರನಗರದ ಕೆಲವು ಪ್ರದೇಶಗಳಲ್ಲಿ ನೈಸ್ ಸಂಸ್ಥೆ ಕಾಮಗಾರಿ ಆರಂಭಿಸಲು ಬೇಕಾದ ಸ್ಥಳದಲ್ಲಿ ಗುಡಿಸಲುಗಳು ಇದ್ದು, ಅದನ್ನು ತೆರವುಗೊಳಿಸಲು ಮಂಗಳವಾರ ಅಧಿಕಾರಿಗಳು ಮುಂದಾಗಿ ಕೆಲವು ಗುಡಿಸಲನ್ನು ತೆರವುಗೊಳಿಸಿದ್ದರು.
ಈ ಸಂದರ್ಭದಲ್ಲಿ ಸುಮಾರು 300 ಗುಡಿಸಲುಗಳಲ್ಲಿ ವಾಸವಾಗಿದ್ದ ನಿವಾಸಿಗಳು ನೈಸ್ ಸಂಸ್ಥೆ ಅಧಿಕಾರಿಗಳೊಂದಿಗೆ ಮಾತಿನ ವಾಗ್ದಾಳಿಗೆ ಮುಂದಾಗಿದ್ದರು. ಗುಡಿಸಲು ತೆರವಿಗೆ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆಗಿಳಿದ ಹಲವು ಸ್ಥಳೀಯರನ್ನು ಪೊಲೀಸರು ಬಂಧಿಸಿದ್ದಾರೆ. |