ಕರ್ನಾಟಕದ ಪೊಲೀಸ್ ಪಡೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಖಾಲಿ ಬಿದ್ದ ಸುಮಾರು 9,431 ಪೊಲೀಸ್ ಕಾನ್ಸ್ಟೇಬಲ್ಗಳ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದಾಗಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸಿಟಿ ಆರ್ಮ್ಡ್ ರಿಸರ್ವ್(ಸಿಎಆರ್) ಪಡೆಗೆ, ಡಿಸ್ಟ್ರಿಕ್ಟ್ ಆರ್ಮ್ಡ್ ರಿಸರ್ವ್(ಡಿಎಆರ್) 6ಸಾವಿರ ಕಾನ್ಸ್ಟೇಬಲ್ ಹಾಗೂ ಸಿವಿಲ್ ಕಾನ್ಸ್ಟೇಬಲ್ಗಳ ನೇಮಕ. 400ಸಬ್ ಇನ್ಸ್ಪೆಕ್ಟರ್ ಮತ್ತು 2854ಮಂದಿ ಕೆಎಸ್ಆರ್ಪಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹಸಚಿವ ವಿ.ಎಸ್.ಆಚಾರ್ಯ ಹೇಳಿದರು.
ಹೊಸದಾಗಿ ಪ್ರಾರಂಭಿಸಿರುವ ಪೊಲೀಸ್ ಠಾಣೆಗಳಿಗೆ ಬೇಕಾಗಿರುವ ಹುದ್ದೆಗಳು ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದರು. ಉಳಿದ ಹುದ್ದೆಗಳನ್ನು ಮುಂದಿನ ಹಂತದಲ್ಲಿ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಪೊಲೀಸ್ ಪೇದೆಗಳ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಲಾಗಿದ್ದ ವಯೋಮಿತಿಯನ್ನು ಸಡಿಲಗೊಳಿಸಿ 23ವರ್ಷಗಳಿಂದ 25ವರ್ಷಕ್ಕೆ ಏರಿಸಲಾಗಿದೆ. ಮೀಸಲಾತಿ ಆಧಾರದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳ ವಯೋಮಿತಿಯನ್ನು 25ರಿಂದ 27ವರ್ಷಕ್ಕೆ, ಹಾಗೆಯೇ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ನಿಗದಿ ಪಡಿಸಲಾಗಿದ್ದ ವಯೋಮಿತಿಯನ್ನು 26ರಿಂದ 28ಕ್ಕೆ ಏರಿಸಲಾಗಿದೆ ಎಂದು ಹೇಳಿದರು.
ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡಲಾಗುವುದು. ಒಟ್ಟಾರೆ ಈ ನೇಮಕಾತಿ ಪಾರದರ್ಶಕವಾಗಿದ್ದು ಇದರಲ್ಲಿ ಯಾವುದೇ ಅವ್ಯವಹಾರಗಳಿಗೆ ಅವಕಾಶ ಇಲ್ಲ ಎಂದು ಆಚಾರ್ಯ ಸ್ಪಷ್ಟಪಡಿಸಿದರು.
|