ಲಿಂಗಾಯಿತ ಧರ್ಮ ಪ್ರಚಾರವನ್ನೇ ಮರೆತಿರುವ ಕೋಡಿಮಠದ ಶ್ರೀಗಳು, ಮಠವನ್ನು ಕುಪ್ರಸಿದ್ಧ ಜ್ಯೋತಿಷ್ಯಾಲಯ ಮಾಡಲು ಹೊರಟಿದ್ದಾರೆಂದು ಬಸವದಳದ ಸಂಚಾಲಕ ವೀರೇಶ್ ಹಾಗೂ ವೀರಶೈವ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳ ಒಕ್ಕೂಟದ ಎಂ.ಆರ್.ಉಮಾಪತಿ ಆರೋಪಿಸಿದ್ದಾರೆ.
ಮಾಧ್ಯಮ ಪ್ರಚಾರ ಪ್ರಿಯತೆ, ರಾಜಕಾರಣಿಗಳ ಸಾಂಗತ್ಯದಲ್ಲಿ ಮಠವನ್ನು ಭಕ್ತರಿಂದ ಬಹುದೂರ ಕೊಂಡೊಯ್ದಿದ್ದಾರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ಕೊಟ್ರೆ ಮಾವನ ಕಡೆ, ಆರು ಕೊಟ್ರೆ ಅತ್ತೆ ಕಡೆ ಎಂಬ ಗಾದೆಯಂತೆ ಒಲಿಯುವ ಈ ಸ್ವಾಮೀಜಿ, ಪಕ್ಷಾಂತರ ಮಾಡುವ ರಾಜಕಾರಣಿಗಳಿಗಿಂತ ಕಡಿಮೆಯೇನಲ್ಲ ಎಂದು ದೂರಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಬಹಳ ದಿನ ಉಳಿಯಲ್ಲ, ಉಳಿದರೂ ಡಿಸೆಂಬರ್ ತನಕ ಎಂಬ ಸ್ವಾಮೀಜಿ ಅವರ ಭವಿಷ್ಯವಾಣಿ ಕೇವಲ ಪ್ರಚಾರಕ್ಕೋಸ್ಕರ ನೀಡಿದ ಹೇಳಿಕೆಯಾಗಿದೆ ಎಂದು ಅವರು ಟೀಕಿಸಿದ್ದಾರೆ. ಮಠದ ಸ್ವಾಮೀಜಿ ನಿಜ ಅರ್ಥದಲ್ಲಿ ಸ್ವಾಮೀಜಿ ಅಲ್ಲ, ಕಾವಿ ಧರಿಸಿರುವ ಜ್ಯೋತಿಷಿ ರಾಜಕಾರಣಿ ಎಂಬುದು ನಾಡಿನ ಪ್ರಜ್ಞಾವಂತರಿಗೆ ತಿಳಿದಿರುವ ವಿಚಾರವೆಂದೂ ಅವರು ಹೇಳಿದ್ದಾರೆ. |