ನಗರದ ಹೃದಯ ಭಾಗದಲ್ಲಿರುವ ರೇಸ್ಕೋರ್ಸ್ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಈ ವರ್ಷದ ಡಿಸೆಂಬರ್ 31ರ ಗಡುವು ನೀಡಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ರೇಸ್ಕೋರ್ಸ್ ಸ್ಥಳಾಂತರ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗಡುವಿನ ನಂತರ ರೇಸ್ಕೋರ್ಸ್ ಮುಂದುವರಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೇಸ್ಕೋರ್ಸ್ ಸ್ಥಳಾಂತರಕ್ಕೆ ನಗರದ ಹೊರವಲಯದಲ್ಲಿರುವ ದೊಡ್ಡಜಾಲದಲ್ಲಿ ಕಂದಾಯ ಇಲಾಖಾ ಅಧಿಕಾರಿಗಳು 12ಎಕರೆ ಜಾಗವನ್ನು ಗುರುತಿಸಿದ್ದಾರೆ. ದೊಡ್ಡಜಾಲದಲ್ಲಿನ ಸ್ಥಳ ಬೆಂಗಳೂರು ಟರ್ಪ್ ಕ್ಲಬ್ ಆಡಳಿತ ಮಂಡಳಿಗೆ ತಾಂತ್ರಿಕ ಅಡಚಣೆಗಳು ಎದುರಾದಲ್ಲಿ ಪರ್ಯಾಯ ಸ್ಥಳವನ್ನು ಬೇರೊಂದು ಕಡೆ ನೀಡಲು ಸರ್ಕಾರ ಸಿದ್ದತೆ ನಡೆಸಲಿದೆ ಎಂದರು.
|