ಬ್ಯಾಂಕ್ ಸಾಲ ತೀರಸಲಾಗದೆ ಅಕ್ಕ-ತಂಗಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಒಟ್ಟಿಗೆ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮತ್ತಿಕೆರೆಯಲ್ಲಿ ಶುಕ್ರವಾರ ನಡೆದಿದೆ.
ಕಮಲಮ್ಮ ಕುಲಶೇಖರ(47) ಹಾಗೂ ಆಕೆಯ ಅಕ್ಕ ಸುಲೋಚನಾ(55) ಎನ್ನುವ ಮಹಿಳೆಯರು ಮತ್ತಿಕೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಕ್ಕ-ತಂಗಿಯರಲ್ಲಿ ಅಕ್ಕ ಸುಲೋಚನಾ ಅವರಿಗೆ ಮದುವೆ ಆಗಿರಲಿಲ್ಲ. ಸಹೋದರಿಯರು ಪ್ರೀತಿಯಿಂದ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.ತಂಗಿ ಕಮಲಮ್ಮ ಕುಲಶೇಖರಗೆ ಮದುವೆಯಾಗಿದ್ದು ಮಕ್ಕಳಿದ್ದಾರೆ.
ಶಿವಪ್ರಸಾದ್ ಎಂಬುವರು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಿ, ನಂತರ ಸಂಬಂಧಿಕರಿಗೆ ಶವಗಳನ್ನು ಹಸ್ತಾಂತರಿಸಲಾಯಿತು. |