ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಾಲಬಾಧೆ: ಅಕ್ಕ-ತಂಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲಬಾಧೆ: ಅಕ್ಕ-ತಂಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಬ್ಯಾಂಕ್ ಸಾಲ ತೀರಸಲಾಗದೆ ಅಕ್ಕ-ತಂಗಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಒಟ್ಟಿಗೆ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮತ್ತಿಕೆರೆಯಲ್ಲಿ ಶುಕ್ರವಾರ ನಡೆದಿದೆ.

ಕಮಲಮ್ಮ ಕುಲಶೇಖರ(47) ಹಾಗೂ ಆಕೆಯ ಅಕ್ಕ ಸುಲೋಚನಾ(55) ಎನ್ನುವ ಮಹಿಳೆಯರು ಮತ್ತಿಕೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಕ್ಕ-ತಂಗಿಯರಲ್ಲಿ ಅಕ್ಕ ಸುಲೋಚನಾ ಅವರಿಗೆ ಮದುವೆ ಆಗಿರಲಿಲ್ಲ. ಸಹೋದರಿಯರು ಪ್ರೀತಿಯಿಂದ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.ತಂಗಿ ಕಮಲಮ್ಮ ಕುಲಶೇಖರಗೆ ಮದುವೆಯಾಗಿದ್ದು ಮಕ್ಕಳಿದ್ದಾರೆ.

ಶಿವಪ್ರಸಾದ್ ಎಂಬುವರು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಿ, ನಂತರ ಸಂಬಂಧಿಕರಿಗೆ ಶವಗಳನ್ನು ಹಸ್ತಾಂತರಿಸಲಾಯಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿ.ಪಂ.ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆ
ಪೊಲೀಸ್ ಪೇದೆಯಿಂದಲೇ ಸರಗಳ್ಳತನ!
35ಕೇಂದ್ರಗಳಲ್ಲಿ ಸರ್ಪಗಾವಲು: ಮತಎಣಿಕೆ 8ಕ್ಕೆ ಆರಂಭ
ಫಲಿತಾಂಶಕ್ಕೆ ಕ್ಷಣಗಣನೆ-ಹಾರ್ಟ್‌ಬೀಟ್ ನಾರ್ಮಲ್ ಆಗಿದೆ: ಖರ್ಗೆ
ಫಲಿತಾಂಶಕ್ಕಾಗಿ 'ರಿಯಲ್ ಟೈಂ ಸಾಫ್ಟ್‌ವೇರ್'
ನೀವು ಉಗ್ರರನ್ನು ಹ್ಯಾಗೆ ಪತ್ತೆ ಹಚ್ಚುತ್ತೀರಿ?: ಹೈಕೋರ್ಟ್ ತರಾಟೆ