ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಬಹುಮತ ಗಳಿಸಿರುವುದಕ್ಕೆ ಸಂತಸಗೊಂಡಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ರಾಜ್ಯದಲ್ಲಿನ ಪಕ್ಷದ ಸಾಧನೆಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ 12ರಿಂದ 15ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇತ್ತು. ಖಾಸಗಿಯಾಗಿ ನಡೆಸಿದ ಸಮೀಕ್ಷೆಯು 10ರಿಂದ 11ಸ್ಥಾನ ಗಳಿಸುವುದಾಗಿ ಹೇಳಿತ್ತು. ಆದರೂ ನಮ್ಮ ನಿರೀಕ್ಷೆಯಷ್ಟು ಸ್ಥಾನ ಗಳಿಸದಿರುವುದಕ್ಕೆ ನಿರಾಸೆಯಾಗಿದೆ ಎಂದು ತಿಳಿಸಿದರು.ಕಾಂಗ್ರೆಸ್ ನಿರೀಕ್ಷೆಗಿಂತ ಕಡಿಮೆ ಸ್ಥಾನಗಳಿಸಲು ಬಿಜೆಪಿಯು ಲೆಕ್ಕವಿಲ್ಲದಷ್ಟು ಹಣ, ಹೆಂಡ ಹಂಚಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು ಕಾರಣವಾಗಿದೆ ಎಂದು ಆಪಾದಿಸಿದರು. ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದು ಕಾರ್ಯಕರ್ತರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಅವರು ಹೇಳಿದರು. |