ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಲಿಫ್ಟ್‌'ನೊಳಗೆ ಸಿಕ್ಕಿಬಿದ್ದ ಸಭಾಪತಿ ವೀರಣ್ಣ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಲಿಫ್ಟ್‌'ನೊಳಗೆ ಸಿಕ್ಕಿಬಿದ್ದ ಸಭಾಪತಿ ವೀರಣ್ಣ!
ಶಿಬಿರದ ಉದ್ಘಾಟನೆಗೆ ಆಗಮಿಸುತ್ತಿದ್ದ ವಿಧಾನಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ಸುಮಾರು 10ನಿಮಿಷಗಳ ಕಾಲ ಕೃಷಿ ಭವನದ ಲಿಫ್ಟ್‌ನೊಳಗೆ ಸಿಲುಕಿಕೊಂಡ ಘಟನೆ ಬುಧವಾರ ನಡೆದಿತ್ತು.

ಕಾರ್ಯಕ್ರಮದ ಸಭಾಂಗಣಕ್ಕೆ ತೆರಳಲು ಸಭಾಪತಿಗಳು ಲಿಫ್ಟ್ ಒಳಗೆ ಸೇರಿದ್ದರು, ಆದರೆ ತಾಂತ್ರಿಕ ಲೋಪದಿಂದ ಲಿಫ್ಟ್ ಮುಂದಕ್ಕೆ ಹೋಗಲಿಲ್ಲ. ಇದರಿಂದಾಗಿ ಲಿಫ್ಟ್ ಒಳಗೆ ಸಭಾಪತಿ ಮತ್ತು ಸಂಗಡಿಗರು ಸಿಕ್ಕಿ ಹಾಕಿಕೊಂಡಿದ್ದರಿಂದ ಪೊಲೀಸರು ಮತ್ತು ಸಂಘಟಕರು ಕೆಲ ಕಾಲ ಆತಂತಕ್ಕೆ ಒಳಗಾದರು.

ನಂತರ ಪೊಲೀಸರು ಹಾಗೂ ಭವನದ ಸಿಬ್ಬಂದಿಗಳು ಹರಸಾಹಸ ಮಾಡಿ ಲಿಫ್ಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಲಿಫ್ಟ್‌ನಿಂದ ಹೊರಬಂದ ವೀರಣ್ಣ ಮತ್ತಿಕಟ್ಟಿ ಅವರು ಉಸಿರುಕಟ್ಟುವಂತಾಗಿತ್ತು ಎಂದು ಪ್ರತಿಕ್ರಿಯಿಸಿದರು. ನಂತರ ಲಿಫ್ಟ್ ಉಸಾಬರಿಯೇ ಬೇಡ ಎಂದು ಮೆಟ್ಟಿಲು ಹತ್ತಿಯೇ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಬಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಉಪಸಭಾಪತಿ' ಕನ್ನಡ ವಿರೋಧಿ ನಿಲುವಿಗೆ ಚಂದ್ರು ಕಿಡಿ
ಸರಣಿ ಸ್ಫೋಟ: ಕೋರ್ಟ್‌‌ಗೆ ಆರೋಪಪಟ್ಟಿ ಸಲ್ಲಿಕೆ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಅತಿ ಆತ್ಮವಿಶ್ವಾಸವೇ ಸೋಲಿಗೆ ಕಾರಣ: ಸಿದ್ದರಾಮಯ್ಯ
ಚಿತ್ರದುರ್ಗ: ಎತ್ತಿನಗಾಡಿ ಹಳ್ಳಕ್ಕೆ ಬಿದ್ದು 19ಮಂದಿ ಜಲಸಮಾಧಿ
ಸಂಸದರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಲಿ: ಕರವೇ