ಶಿಬಿರದ ಉದ್ಘಾಟನೆಗೆ ಆಗಮಿಸುತ್ತಿದ್ದ ವಿಧಾನಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ಸುಮಾರು 10ನಿಮಿಷಗಳ ಕಾಲ ಕೃಷಿ ಭವನದ ಲಿಫ್ಟ್ನೊಳಗೆ ಸಿಲುಕಿಕೊಂಡ ಘಟನೆ ಬುಧವಾರ ನಡೆದಿತ್ತು.
ಕಾರ್ಯಕ್ರಮದ ಸಭಾಂಗಣಕ್ಕೆ ತೆರಳಲು ಸಭಾಪತಿಗಳು ಲಿಫ್ಟ್ ಒಳಗೆ ಸೇರಿದ್ದರು, ಆದರೆ ತಾಂತ್ರಿಕ ಲೋಪದಿಂದ ಲಿಫ್ಟ್ ಮುಂದಕ್ಕೆ ಹೋಗಲಿಲ್ಲ. ಇದರಿಂದಾಗಿ ಲಿಫ್ಟ್ ಒಳಗೆ ಸಭಾಪತಿ ಮತ್ತು ಸಂಗಡಿಗರು ಸಿಕ್ಕಿ ಹಾಕಿಕೊಂಡಿದ್ದರಿಂದ ಪೊಲೀಸರು ಮತ್ತು ಸಂಘಟಕರು ಕೆಲ ಕಾಲ ಆತಂತಕ್ಕೆ ಒಳಗಾದರು.
ನಂತರ ಪೊಲೀಸರು ಹಾಗೂ ಭವನದ ಸಿಬ್ಬಂದಿಗಳು ಹರಸಾಹಸ ಮಾಡಿ ಲಿಫ್ಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಲಿಫ್ಟ್ನಿಂದ ಹೊರಬಂದ ವೀರಣ್ಣ ಮತ್ತಿಕಟ್ಟಿ ಅವರು ಉಸಿರುಕಟ್ಟುವಂತಾಗಿತ್ತು ಎಂದು ಪ್ರತಿಕ್ರಿಯಿಸಿದರು. ನಂತರ ಲಿಫ್ಟ್ ಉಸಾಬರಿಯೇ ಬೇಡ ಎಂದು ಮೆಟ್ಟಿಲು ಹತ್ತಿಯೇ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಬಂದರು. |