ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಚಿವ ಸ್ಥಾನಕ್ಕೆ ತೊಂದರೆ ಇಲ್ಲ: ಗೂಳಿಹಟ್ಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಚಿವ ಸ್ಥಾನಕ್ಕೆ ತೊಂದರೆ ಇಲ್ಲ: ಗೂಳಿಹಟ್ಟಿ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನದಲ್ಲಿ ಜಯಗಳಿಸಿರುವುದರಿಂದ ತಮ್ಮ ಸ್ಥಾನಕ್ಕೆ ಯಾವುದೇ ಸಂಚಕಾರವಿಲ್ಲ ಎಂಬ ವಿಶ್ವಾಸವನ್ನು ಕ್ರೀಡಾ ಹಾಗೂ ಜವಳಿ ಖಾತೆ ಸಚಿವ ಗೂಳಿಹಟ್ಟಿ ಶೇಖರ್ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸಚಿವ ಸ್ಥಾನಕ್ಕೆ ಕುತ್ತು ಬರಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ. ಅವಧಿ ಮುಗಿಯುವವರೆಗೆ ಮುಂದುವರಿಯುತ್ತೇನೆ ಎಂದು ಹೇಳಿದರು.

ಚಿಕ್ಕಮಗಳೂರು ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾ ವಸತಿ ಶಾಲೆ ಕಟ್ಟಡಗಳನ್ನು, 10 ಕೋಟಿ ರೂ, ವೆಚ್ಚದಲ್ಲಿ ಮೈಸೂರು, ಮಂಗಳೂರು, ಉಡುಪಿ ಹಾಗೂ ಧಾರವಾಡದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.

ಆವಳಿ ನೀತಿ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ಕೇಂದ್ರ ತೆರೆಯಲಾಗುತ್ತದೆ. 17 ಸಾವಿರ ಮಂದಿಗೆ ತರಬೇತಿ ನೀಡಲಾಗಿದ್ದು, 22 ಸಾವಿರ ಮಂದಿಗೆ ತರಬೇತಿ ನೀಡುವ ಗುರಿ ಇದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಸದ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ?
ಬೆಳಗಾವಿ: ಐರಾವತ ಪಲ್ಟಿ-ಐವರು ಸಾವು
ಪ್ರತಿಪಕ್ಷ ಸ್ಥಾನ: ಸಿದ್ದುಗೆ ದೇಶಪಾಂಡೆ ಸಾಥ್
'ಲಿಫ್ಟ್‌'ನೊಳಗೆ ಸಿಕ್ಕಿಬಿದ್ದ ಸಭಾಪತಿ ವೀರಣ್ಣ!
'ಉಪಸಭಾಪತಿ' ಕನ್ನಡ ವಿರೋಧಿ ನಿಲುವಿಗೆ ಚಂದ್ರು ಕಿಡಿ
ಸರಣಿ ಸ್ಫೋಟ: ಕೋರ್ಟ್‌‌ಗೆ ಆರೋಪಪಟ್ಟಿ ಸಲ್ಲಿಕೆ