ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾವೇರಿ ಮಳಿಗೆಯಲ್ಲಿ ಮತ್ತೆ ಬೆಂಕಿ-ಕೋಟ್ಯಂತರ ರೂ.ಹಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾವೇರಿ ಮಳಿಗೆಯಲ್ಲಿ ಮತ್ತೆ ಬೆಂಕಿ-ಕೋಟ್ಯಂತರ ರೂ.ಹಾನಿ
ದುಬಾರಿ ಬೆಲೆಯ ಕರಕುಶಲ ವಸ್ತುಗಳು ರೇಶ್ಮೆ ಸೀರೆಗಳು ಸೇರಿ ಅಲಂಕಾರಿಕ ವಸ್ತುಗಳೇ ತುಂಬಿದ್ದ ಎಂ.ಜಿ. ರಸ್ತೆಯ ಕಾವೇರಿ ಭವನ ಇಂಡಸ್ಟ್ರೀಸ್‌ನ ಎಕ್ಸ್‌ಬಿಟ್ಸ್‌ಗೆ ಶುಕ್ರವಾರ ತಗುಲಿದ ಆಕಸ್ಮಿಕ ಬೆಂಕಿಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

ಟ್ರಿನಿಟಿ ಕಾಂಪ್ಲೆಕ್ಸ್‌ನಲ್ಲಿರುವ ಕಾವೇರಿ ಇಂಡಸ್ಟ್ರೀಸ್ ಎಕ್ಸ್‌ಬಿಟ್ಸ್‌ನಲ್ಲಿ ನಸುಕಿನ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವುದಾಗಿ ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಪ ಪ್ರಮಾಣದ ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಇಡೀ ಮಳಿಗೆ ಆವರಿಸಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸತತ ಎರಡು ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಿವೆ.

ಬೆಂಕಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಯ ರೇಷ್ಮೆ ಸೀರೆ, ಕರಕುಶಲ ವಸ್ತು, ಅಲಂಕಾರಿಕ ವಸ್ತುಗಳು ಸುಟ್ಟು ಭಸ್ಮವಾಗಿವೆ. ಕೆಲವು ದಿನಗಳ ಹಿಂದಷ್ಟೇ ಕಾವೇರಿ ಕರಕುಶಲ ವಸ್ತುಗಳ ಎಂಜಿ ರಸ್ತೆಯ ಮಳಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಲಿಸದ ತಂತ್ರ-ಪಕ್ಷ ಸಂಘಟನೆಯತ್ತ ಜೆಡಿಎಸ್
ಬಿಜೆಪಿಯಿಂದ ಯತ್ನಾಳ್‌ಗೆ 'ಗೇಟ್‌ಪಾಸ್‌‌'
ತಾಯಾಣೆಗೂ ಬಿಜೆಪಿಗೆ ದ್ರೋಹ ಬಗೆದಿಲ್ಲ: ಕೃಷ್ಣಯ್ಯ ಶೆಟ್ಟಿ
ಆಂಗ್ಲ ಮಾಧ್ಯಮಕ್ಕೆ ಅನುಮತಿ ಕೋರಿ ಹೈಕೋರ್ಟ್ ಮೊರೆ
ಸಂಪುಟದಲ್ಲಿ ಖರ್ಗೆ, ಮುನಿಯಪ್ಪ, ಆಸ್ಕರ್ ?
ರಾಜ್ಯಕ್ಕೆ ಈವರೆಗೂ ಕ್ಯಾಬಿನೆಟ್ ದರ್ಜೆ ಸಿಕ್ಕಿಲ್ಲ: ಕೃಷ್ಣ