ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು: ಐವರು ಸಾಮೂಹಿಕ ಆತ್ಮಹತ್ಯೆಗೆ ಯತ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು: ಐವರು ಸಾಮೂಹಿಕ ಆತ್ಮಹತ್ಯೆಗೆ ಯತ್ನ
ಒಂದೇ ಕುಟುಂಬದ ಐವರು ಮಂದಿ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಶನಿವಾರ ನಡೆದಿದೆ.

ಕಾಟಿಪಳ್ಳ ಪಡುಪಾದವು ಎಂಬಲ್ಲಿನ ಹೆನ್ರಿ ಡಿ'ಸೋಜಾ (70ವ) ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೆನ್ರಿ ಸೇರಿದಂತೆ ಲತೀಶ್, ಜೆಸ್ಸಿ, ಅನಿತಾ ಹಾಗೂ ಸವಿತಾ ಸ್ಥಿತಿ ಚಿಂತಾಜನಕವಾಗಿದ್ದು ಅವರೆಲ್ಲರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಹೆನ್ರಿ ಡಿಸೋಜಾ ಅವರ ಕುಟುಂಬ ಏಕಾಏಕಿಯಾಗಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಮುಂದಾಗಲು ಕಾರಣ ಏನೆಂದು ತಿಳಿದು ಬಂದಿಲ್ಲ. ಇದೀಗ ಗಂಭೀರವಾಗಿ ಅಸ್ವಸ್ಥಗೊಂಡ ಕುಟುಂಬದ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದರಾಮಯ್ಯ ನಮ್ಮ ವೈರಿಯಲ್ಲ: ಎಚ್.ಡಿ.ರೇವಣ್ಣ
'ನನಗೆ ಸರ್ಕಾರಿ ಮನೆ,ಹೊಸ ಕಾರು ಕೊಡಿ': ಉಗ್ರಪ್ಪ
ರೇವಣ್ಣ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಲಷ್ಕರ್ ದಾಳಿ ಬೆದರಿಕೆ: ರಾಜ್ಯದಲ್ಲೂ ಹೈ ಅಲರ್ಟ್
'ಕಟ್ಟಾ ಸಿಎಂ ಹೊಗಳು ಭಟ್ಟ': ರೇಣುಕಾಚಾರ್ಯ ಕಿಡಿ
ರೆಡ್ಡಿ ಸಹೋದರರ ಬಗ್ಗೆ ಆರೋಪ ಸಲ್ಲ: ಸಿಎಂ