ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಉಸ್ತುವಾರಿ ಸಚಿವಗಿರಿಯಿಂದ ಮುಕ್ತಿಗೊಳಿಸಿ': ಶೋಭಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಉಸ್ತುವಾರಿ ಸಚಿವಗಿರಿಯಿಂದ ಮುಕ್ತಿಗೊಳಿಸಿ': ಶೋಭಾ
NRB
ಗ್ರಾಮೀಣಾಭಿವೃದ್ಧಿ ದೊಡ್ಡ ಇಲಾಖೆ ಕಳೆದ ಕೆಲವು ತಿಂಗಳಿನಿಂದ ಸರಿಯಾಗಿ ಗಮನ ಕೊಡಲು ಸಾಧ್ಯವಾಗಿಲ್ಲ, ಆ ನಿಟ್ಟಿನಲ್ಲಿ ಉಸ್ತುವಾರಿ ಸಚಿವಗಿರಿಯಿಂದ ನನಗೆ ಮುಕ್ತಿ ನೀಡಿ'ಅಂತ ಸಚಿವೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಹಿರಂಗವಾಗಿ ಮಾಡಿಕೊಂಡ ಮನವಿ ಇದು.

ಸಂದರ್ಭ: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆಗೆ ಏರಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಾಸ ಸಂಕಲ್ಪ ಉತ್ಸವದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಸಾಕಪ್ಪೋ ಸಾಕು...ನನ್ನ ಉಸ್ತುವಾರಿ ಸಚಿವ ಹುದ್ದೆಯಿಂದ ಬಿಡುಗಡೆಗೊಳಿಸಿ ಎಂದು ನೆರೆದಿದ್ದ ಸಾವಿರಾರು ಜನರ ಎದುರೇ ಮನವಿ ಮಾಡಿಕೊಳ್ಳುವ ಮೂಲಕ ಅಚ್ಚರಿಗೀಡುಮಾಡಿದರು.

ಆದರೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಇಲಾಖೆ ದೊಡ್ಡದು ಅಂತ ತಿಳಿದಿದೆ, ಆದರೂ ಶೋಭಾ ಕರಂದ್ಲಾಜೆಯವರು ಬೇರೆ, ಬೇರೆ ಕಾರಣಗಳಿಂದ ಆ ಮಾತನ್ನು ಹೇಳಿರಬಹುದು. ಏನೇ ಇರಲಿ ನೀವೇ ಮುತುವರ್ಜಿ ವಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆಯನ್ನೂ ನಿರ್ವಹಿಸಬೇಕು ಎಂದು ಶೋಭಾ ಅವರ ಮನವಿಯನ್ನು ನಯವಾಗಿ ತಳ್ಳಿಹಾಕಿದರು.

ಎಲ್ಲಾ ಅಡ್ಡಿ-ಆತಂಕಗಳ ನಡುವೆ ನಾವು ಅಭಿವೃದ್ಧಿಗೆ ಮೊದಲ ಆದ್ಯತೆ ಕೊಟ್ಟು ಕೆಲಸ ಮಾಡಬೇಕಾಗಿದೆ. ನೀವು ಈಗಾಗಲೇ ಮೈಸೂರು ದಸರಾದಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀರಿ. ಅದೇ ರೀತಿ ಇನ್ನು ಮುಂದೆಯೂ ನೀವು ಕಾರ್ಯನಿರ್ವಹಿಸಿ, ನಂತರದ ದಿನಗಳಲ್ಲಿ ಏನಾಗುತ್ತೆ ಅಂತ ನೋಡುವಾ ಎಂದು ಮುಖ್ಯಮಂತ್ರಿಗಳು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಿನ್ನಮತ ಇಲ್ಲ;ಇದೆಲ್ಲಾ ಮಾಧ್ಯಮಗಳ ಸೃಷ್ಟಿ: ರೆಡ್ಡಿ
ಮಂಗಳೂರು: ಐವರು ಸಾಮೂಹಿಕ ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ನಮ್ಮ ವೈರಿಯಲ್ಲ: ಎಚ್.ಡಿ.ರೇವಣ್ಣ
'ನನಗೆ ಸರ್ಕಾರಿ ಮನೆ,ಹೊಸ ಕಾರು ಕೊಡಿ': ಉಗ್ರಪ್ಪ
ರೇವಣ್ಣ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಲಷ್ಕರ್ ದಾಳಿ ಬೆದರಿಕೆ: ರಾಜ್ಯದಲ್ಲೂ ಹೈ ಅಲರ್ಟ್