ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಕೆಲವು ಮಂತ್ರಿಗಳಿಗೆ ಲಗಾಮು ಹಾಕ್ಬೇಕು: ಬೇಳೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಕೆಲವು ಮಂತ್ರಿಗಳಿಗೆ ಲಗಾಮು ಹಾಕ್ಬೇಕು: ಬೇಳೂರು
ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ, ಸಚಿವ ಸಂಪುಟದ ಕೆಲವು ಸಚಿವರನ್ನು ಹದ್ದುಬಸ್ತಿನಲ್ಲಿಟ್ಟರೆ ಎಲ್ಲ ಸರಿ ಹೋಗುತ್ತದೆ ಎಂದು ಗಣಿಧಣಿ ಬಣದಲ್ಲಿ ಗುರುತಿಸಿಕೊಂಡಿರುವ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಪರೋಕ್ಷವಾಗಿ ಹರತಾಳ ಹಾಲಪ್ಪಗೆ ತಿರುಗೇಟು ನೀಡಿದ್ದಾರೆ.

ಶುಕ್ರವಾರ ರಾಜಧಾನಿಯಲ್ಲಿ ಗಣಿಧಣಿಗಳು ನಡೆಸಿರುವ ಗುಪ್ತ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಚರ್ಚಿಸಿದ್ದಲ್ಲ, ಅದೊಂದು ಸೌಹಾರ್ದಯುತ ಮಾತುಕತೆ ಅಷ್ಟೇ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಸಚಿವ ಸಂಪುಟದಲ್ಲಿರುವ ಕೆಲವು ಸಚಿವರುಗಳ ವರ್ತನೆಯಿಂದ ತಮಗೆ ಬೇಸರ ತಂದಿದೆ. ಅವರನ್ನೆಲ್ಲಾ ಹದ್ದು ಬಸ್ತಿನಲ್ಲಿ ಇಟ್ಟರೆ ಎಲ್ಲಾ ಸರಿ ಹೋಗಲಿದೆ ಎಂದರು.

ಸೊರಬದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಬಾರದಿರುವುದರ ಬಗ್ಗೆ ತಮಗೆ ಅಸಮಾಧಾನವಿದ್ದು, ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದೇನೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಾಯುಕ್ತ ನ್ಯಾ.ಹೆಗ್ಡೆ ವಿರುದ್ಧ ಮಾನನಷ್ಟ ದಾವೆ
'ಉಸ್ತುವಾರಿ ಸಚಿವಗಿರಿಯಿಂದ ಮುಕ್ತಿಗೊಳಿಸಿ': ಶೋಭಾ
ಭಿನ್ನಮತ ಇಲ್ಲ;ಇದೆಲ್ಲಾ ಮಾಧ್ಯಮಗಳ ಸೃಷ್ಟಿ: ರೆಡ್ಡಿ
ಮಂಗಳೂರು: ಐವರು ಸಾಮೂಹಿಕ ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ನಮ್ಮ ವೈರಿಯಲ್ಲ: ಎಚ್.ಡಿ.ರೇವಣ್ಣ
'ನನಗೆ ಸರ್ಕಾರಿ ಮನೆ,ಹೊಸ ಕಾರು ಕೊಡಿ': ಉಗ್ರಪ್ಪ