ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ, ಸಚಿವ ಸಂಪುಟದ ಕೆಲವು ಸಚಿವರನ್ನು ಹದ್ದುಬಸ್ತಿನಲ್ಲಿಟ್ಟರೆ ಎಲ್ಲ ಸರಿ ಹೋಗುತ್ತದೆ ಎಂದು ಗಣಿಧಣಿ ಬಣದಲ್ಲಿ ಗುರುತಿಸಿಕೊಂಡಿರುವ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಪರೋಕ್ಷವಾಗಿ ಹರತಾಳ ಹಾಲಪ್ಪಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ರಾಜಧಾನಿಯಲ್ಲಿ ಗಣಿಧಣಿಗಳು ನಡೆಸಿರುವ ಗುಪ್ತ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಚರ್ಚಿಸಿದ್ದಲ್ಲ, ಅದೊಂದು ಸೌಹಾರ್ದಯುತ ಮಾತುಕತೆ ಅಷ್ಟೇ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸಚಿವ ಸಂಪುಟದಲ್ಲಿರುವ ಕೆಲವು ಸಚಿವರುಗಳ ವರ್ತನೆಯಿಂದ ತಮಗೆ ಬೇಸರ ತಂದಿದೆ. ಅವರನ್ನೆಲ್ಲಾ ಹದ್ದು ಬಸ್ತಿನಲ್ಲಿ ಇಟ್ಟರೆ ಎಲ್ಲಾ ಸರಿ ಹೋಗಲಿದೆ ಎಂದರು.
ಸೊರಬದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಬಾರದಿರುವುದರ ಬಗ್ಗೆ ತಮಗೆ ಅಸಮಾಧಾನವಿದ್ದು, ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದೇನೆ ಎಂದು ಹೇಳಿದರು. |