ಈಜಿಪ್ಟ್ನ ಕೈರೋದಿಂದ ಮಂಗಳೂರಿಗೆ ಆಗಮಿಸಿದ್ದ ಕಾರ್ಕಳ ನಿವಾಸಿಯೊಬ್ಬರಲ್ಲಿ ಎಚ್1ಎನ್1 ಸೋಂಕು ಶಂಕೆ ಇರುವುದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ರಜೆಯ ನಿಮಿತ್ತ ಕೈರೋದಿಂದ ಆಗಮಿಸಿದ್ದ ಕಾರ್ಕಳ ನಿವಾಸಿ ವಿಶ್ವನಾಥ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದಾಗ ಸೋಂಕು ಇರುವುದಾಗಿ ಪತ್ತೆಯಾಗಿದ್ದು, ಇದೀಗ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಚ್1ಎನ್1 ಸೋಂಕಿನ ಪತ್ತೆ ಖಚಿತಪಡಿಸುವ ಸಲುವಾಗಿ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಜಾಗತಿಕವಾಗಿ ಭೀತಿ ಮೂಡಿಸಿರುವ ಹಂದಿಜ್ವರ (ಎಚ್1ಎನ್1) ಭಾರತದಲ್ಲಿಯೂ ಕಾಣಿಸಿಕೊಳ್ಳತೊಡಗಿದೆ. ಮಂಗಳವಾರವಷ್ಟೇ ಇಬ್ಬರಿಗೆ ಎಚ್1ಎನ್1 ಸೋಂಕು ಇರುವುದು ಪತ್ತೆಯಾಗಿತ್ತು. ಹಂದಿಜ್ವರ ಸೋಂಕು ತಡೆಗಾಗಿ ದೇಶಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬೀ ಅಜಾದ್ ತಿಳಿಸಿದ್ದರು. |