ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನ್ಯಾಯಬೆಲೆ ಅಂಗಡಿ-ಮೋಸ ಮಾಡಿದ್ರೆ ಜಾಗ್ರತೆ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಬೆಲೆ ಅಂಗಡಿ-ಮೋಸ ಮಾಡಿದ್ರೆ ಜಾಗ್ರತೆ: ಸಿಎಂ
ಬಡವರ ಹೊಟ್ಟೆ ಮೇಲೆ ಹೊಡೆದು ನ್ಯಾಯಬೆಲೆ ಅಂಗಡಿಯಲ್ಲಿ ಏನಾದರು ಅವ್ಯವಹಾರ ನಡೆಸುತ್ತಿದ್ದದ್ದು ತಿಳಿದು ಬಂದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನ್ಯಾಯ ಬೆಲೆ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗಾಗಿ ನ್ಯಾಯ ಬೆಲೆ ಆಂಗಡಿಗಳ ಯೋಜನೆಯನ್ನು ಮಾಡಲಾಗಿದೆ. ಅವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವ ಕಾರ್ಯಕ್ಕೆ ಮುಂದಾದರೆ ಸಹಿಸುವುದಿಲ್ಲ.

ಈ ವಿಚಾರದಲ್ಲಿ ಯಾವುದೇ ಅಧಿಕಾರಿ ಲಂಚ ಪಡೆಯುವುದಾಗಲಿ, ಅನ್ಯಾಯ ಮಾಡುವುದಾಗಲಿ ಕಂಡುಬಂದರೆ ಹಿಂದು ಮುಂದು ನೋಡದೆ ಅಂಥ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಈಗಾಗಲೇ ಅವ್ಯವಹಾರದಲ್ಲಿ ತೊಡಗಿದ್ದ 87 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, 31 ಅಧಿಕಾರಿಗಳಿಗೆ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಎಂಗೆ ಗಡುವು ವಿಧಿಸುವುದು ಸರಿಯಲ್ಲ: ಧನಂಜಯ್
ಸಿಲಿಕಾನ್ ಸಿಟಿ ಸ್ಫೋಟಕ್ಕೂ ಸಯೀದ್ ಸಂಚು!
ಭಿನ್ನಮತ ಇದ್ದದ್ದು ಹೌದು: ಕೆ.ಎಸ್. ಈಶ್ವರಪ್ಪ
ಕಾರ್ಕಳ ನಿವಾಸಿಗೆ ಎಚ್‌1ಎನ್‌1 ಸೋಂಕು ಶಂಕೆ
ಜೇಟ್ಲಿ ಸಾರಥ್ಯದಲ್ಲಿ ಬಂಡಾಯ ಶಮನಕ್ಕೆ ಯತ್ನ?
ಮೈಸೂರು: ಸ್ಟಾಫ್‌ರೂಂನಲ್ಲೇ ಪ್ರೊಫೆಸರ್ ಹತ್ಯೆ