ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲಿಂಗಾಯಿತ ಹಿಂದುಳಿದ ವರ್ಗವಲ್ಲ: ಆಯೋಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಿಂಗಾಯಿತ ಹಿಂದುಳಿದ ವರ್ಗವಲ್ಲ: ಆಯೋಗ
ಸಾದರ ಲಿಂಗಾಯಿತ/ವೀರಶೈವ ಸಮುದಾಯವನ್ನು ಸರ್ಕಾರ ಏಕಾಏಕಿ 2(ಎ) ಪ್ರವರ್ಗಕ್ಕೆ ಸೇರಿಸಿರುವ ನಿಲುವನ್ನು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಸರ್ಕಾರದ ಈ ಕ್ರಮದಿಂದ ತೀವ್ರ ಅಸಮಾಧಾನಗೊಂಡಿರುವ ಹಿಂದುಳಿದ ವರ್ಗಗಳ ಆಯೋಗ ಈ ಆದೇಶವನ್ನು ಪಾಲಿಸದಿರುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಹಿಂದುಳಿದ ವರ್ಗಗಳಿಂದ ಸಾರ್ವಜನಿಕ ವಿಚಾರಣೇ ನಡೆಸಲು ಮುಂದಾಗಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಈ ಆದೇಶ ಸರಿಯಲ್ಲ. ಬಡವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಈ ಕುರಿತು ಜೂನ್ 16ರಂದು ಆಯೋಗ ಸಭೆ ನಡೆಸಿ ತೀರ್ಮಾನಿಸಲಿದೆ ಎಂದಿದೆ.

ಈ ಹೊಸ ಆದೇಶದ ಅನ್ವಯ ಯಾವುದಾದರು ನೇಮಕಾತಿ ನಡೆದಿದ್ದರೆ ಅದನ್ನು ರದ್ದು ಮಾಡುವಂತೆಯೂ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲು ಸಹ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರ ಕಾನೂನು ಬಾಹಿರವಾಗಿದೆ. ಯಾವುದೇ ಕಾರಣಕ್ಕೂ ಲಿಂಗಾಯಿತ ಅಥವಾ ವೀರಶೈವರನ್ನು 2(ಎ) ಎಂದು ಪರಿಗಣಿಸಬಾರದೆಂದು ಜಿಲ್ಲಾಧಿಕಾರಿಗಳಿಗೆ ಆಯೋಗ ಆದೇಶ ನೀಡಲು ನಿರ್ಧರಿಸಿದೆ. ಈ ನಿರ್ಧಾರದಿಂದ ಸರ್ಕಾರ ಮತ್ತು ಆಯೋಗದ ನಡುವೆ ಗುದ್ದಾಟ ಆರಂಭವಾಗಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಈ ಆದೇಶದ ಪ್ರಕಾರ ಹಿಂದು ಲಿಂಗಾಯಿತ, ವೀರಶೈವ ಮತ್ತು ಅದರ ಎಲ್ಲಾ ಉಪಜಾತಿಗಳು ಪ್ರವರ್ಗ 3(ಬಿ) ಬದಲಾಗಿ ಪ್ರವರ್ಗ2(ಎ) ಸೇರಲಿದೆ. ಇದರಿಂದ ಶಾಲೆ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಪಡೆಯಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೂಕು ನುಗ್ಗಲು ಉಂಟಾಗಲಿದೆ ಎಂದು ದೂರಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯಕ್ಕೆ ಕೇಂದ್ರದಿಂದ ಆರ್ಥಿಕ ನೆರವು
ನ್ಯಾಯಬೆಲೆ ಅಂಗಡಿ-ಮೋಸ ಮಾಡಿದ್ರೆ ಜಾಗ್ರತೆ: ಸಿಎಂ
ಸಿಎಂಗೆ ಗಡುವು ವಿಧಿಸುವುದು ಸರಿಯಲ್ಲ: ಧನಂಜಯ್
ಸಿಲಿಕಾನ್ ಸಿಟಿ ಸ್ಫೋಟಕ್ಕೂ ಸಯೀದ್ ಸಂಚು!
ಭಿನ್ನಮತ ಇದ್ದದ್ದು ಹೌದು: ಕೆ.ಎಸ್. ಈಶ್ವರಪ್ಪ
ಕಾರ್ಕಳ ನಿವಾಸಿಗೆ ಎಚ್‌1ಎನ್‌1 ಸೋಂಕು ಶಂಕೆ