ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಠಾಣೆಯಲ್ಲಿ ಅಕ್ರಮ ಬಂಧನ: ಆಯೋಗ ಛೀಮಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಠಾಣೆಯಲ್ಲಿ ಅಕ್ರಮ ಬಂಧನ: ಆಯೋಗ ಛೀಮಾರಿ
ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಒಬ್ಬ ಬಾಲಕ ಸೇರಿ 15 ಮಂದಿಯನ್ನು ಬಂಧನದಲ್ಲಿಟ್ಟಿದ್ದನ್ನು ತಿಳಿದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಮತ್ತು ಐಜಿಪಿ ಬಿಪಿನ್ ಗೋಪಾಲಕೃಷ್ಣ ಹಠಾತ್ ಭೇಟಿ ಮಾಡಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ಕಾನೂನು, ಸಂವಿಧಾನಕ್ಕೆ ನಿಮ್ಮ ಮುಂದೆ ಬೆಲೆಯೇ ಇಲ್ಲವೇ. ಅಪರಾಧದ ಹೆಸರಿನಲ್ಲಿ ತಿಂಗಳುಗಟ್ಟಲೆ ಅಕ್ರಮವಾಗಿ ನಾಗರಿಕರನ್ನು ಹೀಗೆ ಸೆರೆಯಲ್ಲಿಟ್ಟುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಠಾಣೆಯ ಅಧಿಕಾರಿಗಳಿಗೆ ಮಾನವ ಹಕ್ಕುಗಳ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಆರ್. ನಾಯಕ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾಲಕನೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ ಎಂಬ ದೂರು ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು ಠಾಣೆಯಲ್ಲಿ ಬಂದು ನೋಡಿದ ನಂತರ ಅಕ್ರಮವಾಗಿ ಬಂಧನದಲ್ಲಿದವರು 15 ಮಂದಿ. ಇದನ್ನು ಕಂಡ ಆಯೋಗದ ಅಧ್ಯಕ್ಷರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಧನದಲ್ಲಿರುವವರನ್ನು ಆದಷ್ಟು ಬೇಗ ಬಿಟ್ಟುಬಿಡಲು ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಅನೇಕ ಠಾಣೆಗಳಲ್ಲಿ ಇಂತಹ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ನಡೆಯುತ್ತಿವೆ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೆಡ್ಡಿಯಿಂದ ತಿಮ್ಮಪ್ಪನಿಗೆ 45ಕೋಟಿ ರೂ.ವಜ್ರ ಕಿರೀಟ
ಸಚಿವ ಸಂಪುಟ ಸಭೆಗೆ 6 ಸಚಿವರು ಗೈರು!
ಸರ್ಕಾರ ಅಸ್ಥಿರಗೊಳಿಸುವ ಸಂಚು ಇಲ್ಲ: ಎಚ್‌ಡಿಕೆ
ಯೋಧರಿಂದ ಶೋಧ: ಅಭಿಷೇಕ್ ದೇಹ ಪತ್ತೆಯಾಗಿಲ್ಲ
ಕೈಗಾ ಅಣು ವಿಜ್ಞಾನಿ ಮಹಾಲಿಂಗಂ ನಾಪತ್ತೆ ನಿಗೂಢ
ನೌಶಾದ್ ಕೊಲೆ ವಿಚಾರಣೆಗೆ ಬೇರೆ ಏಜೆನ್ಸಿ ಬೇಡ: ಹೈಕೋರ್ಟ್