ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಿನ್ನಮತವಿಲ್ಲ-ಜೇಟ್ಲಿ ಭೇಟಿ ಔಪಚಾರಿಕ!: ಸದಾನಂದ ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಿನ್ನಮತವಿಲ್ಲ-ಜೇಟ್ಲಿ ಭೇಟಿ ಔಪಚಾರಿಕ!: ಸದಾನಂದ ಗೌಡ
ಜೇಟ್ಲಿ ಸಂಧಾನ ಸಭೆಗೂ ಗಣಿಧಣಿಗಳು ಗೈರು...
NRB
ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಭಿಪ್ರಾಯ ತಲೆದೋರಿಲ್ಲ ಎಂದು ತಿಳಿಸಿರುವ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಪಕ್ಷದ ವರಿಷ್ಠ ಅರುಣ್ ಜೇಟ್ಲಿ ಅವರ ಭೇಟಿ ಔಪಚಾರಿಕವಾದದ್ದು ಎಂದು ತಿಪ್ಪೆ ಸಾರಿದ್ದಾರೆ.

ನಗರದ ಪಂಚತಾರಾ ಹೊಟೇಲ್‌ನಲ್ಲಿ ಮೊದಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಸಚಿವರನ್ನು ಕರೆಸಿಕೊಂಡು ಜೇಟ್ಲಿ ಮಾತುಕತೆ ನಡೆಸಿದರು. ನಂತರ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಗುಂಪಿನ ಸದಸ್ಯರೊಂದಿಗೆ ಮೂರುವರೆ ಗಂಟೆ ಕಾಲ ಸಮಾಲೋಚನೆ ನಡೆಸಿದ್ದರು. ರಾತ್ರಿ ಎರಡೂ ಬಣಗಳನ್ನು ಒಟ್ಟಿಗೆ ಸೇರಿಸಿ ಸಭೆ ನಡೆಸಿದರು. ಆದರೆ ಈ ಸಂಧಾನ ಪ್ರಕ್ರಿಯೆಯಿಂದ ಬಳ್ಳಾರಿ ಗಣಿಧಣಿಗಳು ದೂರ ಉಳಿದಿದ್ದರು.

ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡರ ನಡುವೆ ಭಿನ್ನಮತ ತಾರಕ್ಕೇರಿ, ಜೇಟ್ಲಿ ಸಾರಥ್ಯದಲ್ಲಿ ಒಡಕು ಮುಚ್ಚಲು ಹರಸಾಹಸ ಪಡುತ್ತಿದ್ದರೂ ಕೂಡ, ಸದಾನಂದ ಗೌಡರು, ಬಿಜೆಪಿಯಲ್ಲಿ ಭಿನ್ನಮತ ಇಲ್ಲ, ಜೇಟ್ಲಿ ಅವರು ಔಪಚಾರಿಕವಾಗಿ ಭೇಟಿ ನೀಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು.

ಗುರುವಾರ ಮಧ್ನಾಹ್ನ ನಗರಕ್ಕೆ ದಿಢೀರ್ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಅವರು ಭಿನ್ನಮತ ಶಮನದ ಪ್ರಯತ್ನಗಳನ್ನು ಪ್ರಾರಂಭಿಸಿದ್ದರು. ಭಿನ್ನಮತ ಪರಿಹಾರಕ್ಕೆ ಜೇಟ್ಲಿ ಬರುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ವಿ.ಧನಂಜಯ್ ಕುಮಾರ್ ಬುಧವಾರವಷ್ಟೇ ಹೇಳಿಕೆ ನೀಡಿದ್ದರು. ಭಿನ್ನಮತ ಶಮನಕ್ಕೆ ಜೇಟ್ಲಿ ಬರಬೇಕು, ಬರುವುದರಲ್ಲಿ ತಪ್ಪೇನಿಲ್ಲ ಎಂದು ಹಿರಿಯ ಸಚಿವ ಈಶ್ವರಪ್ಪ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜುಲೈ 9ರಿಂದ24: ವಿಧಾನಮಂಡಲ ಅಧಿವೇಶನ
ಠಾಣೆಯಲ್ಲಿ ಅಕ್ರಮ ಬಂಧನ: ಆಯೋಗ ಛೀಮಾರಿ
ರೆಡ್ಡಿಯಿಂದ ತಿಮ್ಮಪ್ಪನಿಗೆ 45ಕೋಟಿ ರೂ.ವಜ್ರ ಕಿರೀಟ
ಸಚಿವ ಸಂಪುಟ ಸಭೆಗೆ 6 ಸಚಿವರು ಗೈರು!
ಸರ್ಕಾರ ಅಸ್ಥಿರಗೊಳಿಸುವ ಸಂಚು ಇಲ್ಲ: ಎಚ್‌ಡಿಕೆ
ಯೋಧರಿಂದ ಶೋಧ: ಅಭಿಷೇಕ್ ದೇಹ ಪತ್ತೆಯಾಗಿಲ್ಲ