ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಕಲಿ ನೋಟು : ಪೂಜಾರಿ ವಿರುದ್ಧದ ವಂಚನೆ ಪ್ರಕರಣ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕಲಿ ನೋಟು : ಪೂಜಾರಿ ವಿರುದ್ಧದ ವಂಚನೆ ಪ್ರಕರಣ ವಜಾ
PTI
ಕೆಪಿಸಿಸಿ ಸದಸ್ಯತ್ವದ ನೆಪದಲ್ಲಿ ನಕಲಿ ನೋಟುಗಳನ್ನು ಹಂಚುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಠೋಡ್ ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ಹೂಡಿದ್ದ ವಂಚನೆ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಂಗಳೂರು ನಗರ 8ನೇ ಎಸಿಎಂಎಂ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಪ್ರಶ್ನಿಸಿ ಪ್ರಕಾಶ್ ರಾಠೋಡ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ್ದ ನ್ಯಾಯಮೂರ್ತಿ ವಿ.ಜಿ. ಸಭಾಹಿತ್ರಿದ್ದ್ ಏಕ ಸದಸ್ಯ ಪೀಠ, ಎಸಿಎಂಎಂ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಿದೆ.

ಜನಾರ್ದನ ಪೂಜಾರಿ ಮತ್ತು ರಾಠೋಡ್ ಅವರುಗಳು ಜನರನ್ನು ವಂಚಿಸುವ ಉದ್ದೇಶದಿಂದ ಈ ಕಾರ್ಯ ನಡೆಸಿಲ್ಲ. ಇದು ಸದಸ್ಯತ್ವ ಪಡೆದವರಿಗೆ ನೀಡುವ ರಸೀದಿಯಾಗಿದ್ದು, ಇದರಿಂದ ಯಾವುದೇ ಹಣ ಮಾಡುವ ಉದ್ದೇಶ ಇರಲಿಲ್ಲ. ಸದಸ್ಯತ್ವ ರಸೀದಿಯನ್ನು ಐದು ರೂ. ನೋಟಿನ ಮಾದರಿಯಲ್ಲಿ ಮುದ್ರಿಸಿರುವುದು ತಪ್ಪಾದರೂ ಅದು ವಂಚನೆಯ ಉದ್ದೇಶದಿಂದಲ್ಲ ಎಂದು ಪ್ರಕರಣವನ್ನು ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪರೀಕ್ಷಾ ಸುಧಾರಣೆ: ಕಸ್ತೂರಿ ರಂಗನ್, ಮುಖ್ಯಮಂತ್ರಿ ಚರ್ಚೆ
ಕರಾವಳಿಯಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ
ಕರ್ನಾಟಕ ಪ್ರತಿಕ್ರಿಯೆ: ಐಟಿ ವಲಯದಲ್ಲಿ ಆಶಾವಾದ
ಹಿರಿಯರನ್ನು ಭೇಟಿಯಾದ್ರೆ ಭಿನ್ನಮತವೇ?: ಆರ್‌ವಿ ಪ್ರಶ್ನೆ
ಮದ್ರಸಕ್ಕೆ ರಕ್ಷಣೆ ಹಿಂತೆಗೆದ ನಂತರವೇ ಹಿಂಸೆ: ಕಾಂಗ್ರೆಸ್
ಮಾಧ್ಯಮ: 21ರವರೆಗೆ ಕಾಲಾವಕಾಶ ಕೇಳಲಿರುವ ಸರ್ಕಾರ