ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಂಪೂರ್ಣ ನಿರಾಶದಾಯಕ ಬಜೆಟ್: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಪೂರ್ಣ ನಿರಾಶದಾಯಕ ಬಜೆಟ್: ಯಡಿಯೂರಪ್ಪ
PTI
ಪ್ರಣಬ್ ಮುಖರ್ಜಿ ಸಲ್ಲಿಸಿರುವ ಕೇಂದ್ರದ ಬಜೆಟ್ ಸಂಪೂರ್ಣ ನಿರಾಶದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಥಿಕ ಹಿಂಜರಿತದಿಂದ ಕಂಗಾಲಾಗಿರುವ ರಾಷ್ಟ್ರದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಪೂರಕವಾಗಬಲ್ಲ ಪ್ರಬಲವಾದ ಸುಧಾರಣ ಕ್ರಮಗಳನ್ನು ನೀಡುವಲ್ಲಿ ಬಜೆಟ್ ವಿಫಲವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಹೆಸರಾದ ಬೆಂಗಳೂರು ನಗರಕ್ಕೆ ಮೂಲಭೂತ ಸೌಲಭ್ಯ ನೀಡುವಂತೆ ಕೋರಿದ್ದೇವು. ಆದರೆ ಕೇಂದ್ರ ಇದನ್ನು ಮನ್ನಣೆ ನೀಡಿಲ್ಲ. ಮುಂಬೈ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರವಾಹ ನಿರ್ವಹಣೆಗಾಗಿ ವಿಶೇಷ ಅನುದಾನ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕದ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಅವರು ದೂರಿದ್ದಾರೆ.

ಅಲ್ಲದೆ, ಸುಮಾರು 1.20 ಕೋಟಿ ಜನರಿಗೆ ಉದ್ಯೋಗ ಒದಗಿಸುವ ಮಾತುಗಳನ್ನಾಡಿರುವ ಹಣಕಾಸು ಸಚಿವರು ಉದ್ಯೋಗ ಸೃಜನೆಯ ಮಾರ್ಗಗಳನ್ನು ಪ್ರಕಟಿಸಿಲ್ಲ. ಗ್ರಾಮೀಣ ವಸತಿಗೆ ಕೇವಲ ಎರಡು ಸಾವಿರ ಕೋಟಿ ರೂಪಾಯಿ ಮತ್ತು ತ್ವರಿತ ನೀರಾವರಿ ನೆರವು ಯೋಜನೆಗಳಿಗೆ ಕಡಿಮೆ ಹಣ ಹಂಚಿಕೆ ಮಾಡಿರುವುದು ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಚಿವ ಸೋಮಣ್ಣ ವಿರುದ್ಧ ಇಂಜಿನಿಯರ್ ಪತ್ನಿ ದೂರು
ನಕಲಿ ನೋಟು : ಪೂಜಾರಿ ವಿರುದ್ಧದ ವಂಚನೆ ಪ್ರಕರಣ ವಜಾ
ಪರೀಕ್ಷಾ ಸುಧಾರಣೆ: ಕಸ್ತೂರಿ ರಂಗನ್, ಮುಖ್ಯಮಂತ್ರಿ ಚರ್ಚೆ
ಕರಾವಳಿಯಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ
ಕರ್ನಾಟಕ ಪ್ರತಿಕ್ರಿಯೆ: ಐಟಿ ವಲಯದಲ್ಲಿ ಆಶಾವಾದ
ಹಿರಿಯರನ್ನು ಭೇಟಿಯಾದ್ರೆ ಭಿನ್ನಮತವೇ?: ಆರ್‌ವಿ ಪ್ರಶ್ನೆ