ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಪ್ಪುಂದ ಬಳಿ ಅಪಘಾತ: 2 ಮಹಿಳೆಯರ ಸಹಿತ 4 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪ್ಪುಂದ ಬಳಿ ಅಪಘಾತ: 2 ಮಹಿಳೆಯರ ಸಹಿತ 4 ಬಲಿ
ಉಡುಪಿ ಜಿಲ್ಲೆಯ ಉಪ್ಪುಂದ-ಅರೆಹೊಳೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಅದಿರುಲಾರಿ ಮತ್ತು ಆಟೋರಿಕ್ಷಾ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಮಂಗಳವಾರ ಸಂಭವಿಸಿದೆ.

ಅದಿರು ಲಾರಿಯು ಈ ನಾಲ್ವರು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಎರಡೂ ವಾಹನಗಳು ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ತೊರೆಗೆ ಬಿದ್ದವು. ಮೃತಪಟ್ಟವರನ್ನು ಲಕ್ಷ್ಮಿ ಗಾಣಿಗ, ವಂದನಾ, ಕೇಶವ ಮತ್ತು ರಿಕ್ಷಾ ಚಾಲಕ ಶಂಕರ ದೇವಾಡಿಗ ಎಂದು ಗುರುತಿಸಲಾಗಿದೆ. ಎಲ್ಲ ನಾಲ್ಕು ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.

ಗಾಯಾಳುಗಳನ್ನು ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಅಪಘಾತ ಸಂಭವಿಸಿದೆಯೆಂದು ವರದಿಯಾಗಿದ್ದು, ಗಾಯಗೊಂಡರಲ್ಲಿ ವಾಣಿ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ.

ರಾಷ್ಟ್ರ್ರೀಯ ಹೆದ್ದಾರಿಯಲ್ಲಿ ವೇಗವಾಗಿ ವಾಹನಗಳ ಚಾಲನೆಯಿಂದ ಇತ್ತೀಚೆಗೆ ಅನೇಕ ಅಪಘಾತಗಳು ಸಂಭವಿಸಿದ್ದು ಅನೇಕ ಮಂದಿ ಜೀವತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಅಪಘಾತ ನಡೆದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಜೆಟ್ ಬಡವರ ಮುಂಗಡ ಪತ್ರ: ದೇಶಪಾಂಡೆ
ಸಂಪೂರ್ಣ ನಿರಾಶದಾಯಕ ಬಜೆಟ್: ಯಡಿಯೂರಪ್ಪ
ಸಚಿವ ಸೋಮಣ್ಣ ವಿರುದ್ಧ ಇಂಜಿನಿಯರ್ ಪತ್ನಿ ದೂರು
ನಕಲಿ ನೋಟು : ಪೂಜಾರಿ ವಿರುದ್ಧದ ವಂಚನೆ ಪ್ರಕರಣ ವಜಾ
ಪರೀಕ್ಷಾ ಸುಧಾರಣೆ: ಕಸ್ತೂರಿ ರಂಗನ್, ಮುಖ್ಯಮಂತ್ರಿ ಚರ್ಚೆ
ಕರಾವಳಿಯಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ