ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುಮಾರಸ್ವಾಮಿ, ನಾಯ್ಕ್ ವಿರುದ್ಧದ ಕೇಸು ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿ, ನಾಯ್ಕ್ ವಿರುದ್ಧದ ಕೇಸು ವಜಾ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯದ ಗ್ರಂಥಾಲಯ ಸಚಿವ ಶಿವನಗೌಡ ನಾಯ್ಕ್ ವಿರುದ್ಧ ದಾಖಲಿಸಲಾಗಿದ್ದ ದೂರನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ಸರ್ಕ್ಯುಟ್ ಪೀಠವು ವಜಾಗೊಳಿಸಿದೆ.

ಈ ದೂರು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂಬ ಕಾರಣಕ್ಕೆ ನ್ಯಾಯಾಧೀಶ ನ್ಯಾಯಮೂರ್ತಿ ಜಗನ್ನಾಥ ರಾವ್ ಅವರು ಕೇಸು ವಜಾಗೊಳಿಸಿದರು. ಮೇ 2008ರ ವಿಧಾನಸಭೆ ಚುನಾವಣೆಗಳ ಸಂದರ್ಭ ದೇವದುರ್ಗದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸಿದ್ದಕ್ಕಾಗಿ ಇವರಿಬ್ಬರ ಮೇಲೆ ಚುನಾವಣಾ ಆಯೋಗವು ಕೇಸು ದಾಖಲಿಸಿತ್ತು.

ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಲ್ಲಿ ಸ್ಪರ್ಧಿಸಿ ಗೆದ್ದಿದ್ದ ಶಿವನಗೌಡ ನಾಯ್ಕ್, ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಆ ಪಕ್ಷದ ಟಿಕೆಟಿನಲ್ಲಿ ಉಪಚುನಾವಣೆಗೆ ನಿಂತು ಗೆದ್ದಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಿಂಗಳೊಳಗೆ ಕ್ರಿಯಾ ಯೋಜನೆ: ಸಿಎಂ ತಾಕೀತು
ನಾನೇನೂ ವಲಸಿಗನಲ್ಲ: ದೇಶಪಾಂಡೆ ಸ್ಪಷ್ಟನೆ
ಇನ್ನು ಇತರ ಅಂಗಡಿಗಳಲ್ಲೂ ವೈನ್ ಲಭ್ಯ
ಉಪ್ಪುಂದ ಬಳಿ ಅಪಘಾತ: 2 ಮಹಿಳೆಯರ ಸಹಿತ 4 ಬಲಿ
ಬಜೆಟ್ ಬಡವರ ಮುಂಗಡ ಪತ್ರ: ದೇಶಪಾಂಡೆ
ಸಂಪೂರ್ಣ ನಿರಾಶದಾಯಕ ಬಜೆಟ್: ಯಡಿಯೂರಪ್ಪ