ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೇಳೂರು-ಹರತಾಳು ಜಟಾಪಟಿ ನಾಳೆ ಚರ್ಚೆ: ಡಿವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇಳೂರು-ಹರತಾಳು ಜಟಾಪಟಿ ನಾಳೆ ಚರ್ಚೆ: ಡಿವಿ
ಸಚಿವ ಹರತಾಳು ಹಾಲಪ್ಪ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ಅವರುಗಳ ನಡುವಿನ ಮುಸುಕಿನ ಗುದ್ದಾಟ ಬಯಲಿಗೆ ಬಂದಿದ್ದು, ಅವರು ಕ್ಷುಲ್ಲಕ ಕಾರಣಕ್ಕಾಗಿ ಸಭೆಯೊಂದರಲ್ಲಿ ಬಹಿರಂಗವಾಗಿ ಗುದ್ದಾಡಿಕೊಂಡು ಶಿವಮೊಗ್ಗ ಬಿಜೆಪಿ ಘಟಕದ ಭಿನ್ನಮತ ಬಯಲಿಗೆ ಬಂದಿದೆ.

ಸಾಗರಕ್ಷೇತ್ರದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಗೆ ತಮ್ಮನ್ನ ಆಹ್ವಾನಿಸಿಲ್ಲ ಎಂದು ಸಿಟ್ಟುಗೊಂಡ ಶಾಸಕ ಗೋಪಾಲಕೃಷ್ಣ ಅವರು ತಮ್ಮ ಬೆಂಬಲಿಗರೊಡನೆ ಸಚಿವ ಹರತಾಳು ಹಾಲಪ್ಪರೊಂದಿಗೆ ಜಟಾಪಟಿಗೆ ಇಳಿದಿದ್ದರು.

ತನ್ನ ತವರು ಜಿಲ್ಲೆಯಲ್ಲೇ ನಡೆದಿರುವ ಈ ಜಟಾಪಟಿಯು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿದ್ದೆಗೆಡಿಸುವಂತೆ ಮಾಡಿದೆ. ಅವರೀಗ ಇಬ್ಬಣಗಳಿಗೆ ತೇಪೆ ಹಚ್ಚುವ ಕಾರ್ಯಕ್ಕಿಳಿದಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ ಆಗಮಿಸಿರುವ ಮುಖ್ಯಮಂತ್ರಿಗಳು ದಿನಪೂರ್ತಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಬಂಡಾಯ ಶಮನಗೊಳಿಸಲು ಯತ್ನಿಸಿದ್ದಾರೆ.

ಪ್ರಕರಣದ ಚರ್ಚೆ ನಾಳೆ
ಈ ಮಧ್ಯೆ ಶಾಸಕ ಹಾಗೂ ಸಚಿವರ ಹೊಯ್ ಕೈ ಅನ್ನು ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ. ಸದಾನಂದ ಗೌಡರು ಈ ಕುರಿತು ಸಚಿವ ಹಾಲಪ್ಪ ಹಾಗೂ ಶಾಸಕ ಬೇಳೂರು ಅವರೊಂದಿಗೆ ಸೋಮವಾರ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾಲ್ಬಾಗ್‌ನಲ್ಲಿ ಪಾನ ಪ್ರಿಯರಿಗಾಗಿ ವೈನ್ ಮೇಳ
ರಾತ್ರಿಯಲ್ಲಿ ಆಯತಪ್ಪಿದ ಗೌಡರ ಕೈಗೆ ಶಸ್ತ್ರಕ್ರಿಯೆ
ಸದನದಲ್ಲಿ ಕೋಲಾಹಲ ಎಬ್ಬಿಸಿದ ಕೆಎಂಎಫ್ ರಾಜಕೀಯ
ಆಂಧ್ರದ ಅಕ್ರಮ ನೀರಾವರಿ ವೀಕ್ಷಣೆಗೆ ರಾಜ್ಯದ ತಂಡ
ಬಿಜೆಪಿ ಬಂಡಾಯ: ಈ ಬಾರಿ ಶೆಟ್ಟರ ಬಾವುಟ
ಪಿಯುಸಿ ಬಲವರ್ಧನೆಗೆ ಚಿಂತನೆ: ಕಾಗೇರಿ