ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ತೆಕ್ಕೆಗೆ ಬಿದ್ದ ಕೆಎಂಎಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ತೆಕ್ಕೆಗೆ ಬಿದ್ದ ಕೆಎಂಎಫ್
NRB
ಸರಿಸರುಮಾರು ಇಪ್ಪತ್ತು ವರ್ಷಗಳ ಕಾಲ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)ವನ್ನು ಆಳಿದ್ದ ಜಿಡಿಎಸ್‌ನ ಎಚ್.ಡಿ. ರೇವಣ್ಣ ಅವರನ್ನು ಕೆಳಗಿಸಲು ಬಿಜೆಪಿ ರೂಪಿಸಿರುವ ತಂತ್ರ ಫಲ ನೀಡಿದೆ. ಈ ತಿಂಗಳ 20 ರಂದು ನಡೆಯಲಿರುವ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಗದ್ದುಗೆಗೆ ರೆಡ್ಡಿ ಸಹೋದರರಲ್ಲೊಬ್ಬರಾಗಿರುವ ಸೋಮಶೇಖರ ರೆಡ್ಡಿ ಏರುವುದು ಬಹುತೇಕ ಖಚಿತ ಎನ್ನಲಾಗಿದೆ.

ಜುಲೈ 9, 10, 11 ರಂದು ನಡೆದ 13 ಜಿಲ್ಲಾ ಹಾಲು ಒಕ್ಕೂಟಗಳ ಚುನಾವಣೆಯಲ್ಲಿ ಬಿಜೆಪಿ ನಿರ್ದೇಶಕರೇ ಆಯ್ಕೆಯಾಗಿದ್ದಾರೆ. ಅಲ್ಲದೇ ಸರಕಾರದಿಂದ ನಾಮಕರಣಗೊಂಡಿರುವ ಮೂರು ಸದಸ್ಯರು ಮತ್ತು ಮೂರು ಅಧಿಕಾರಿಗಳು ಬಿಜೆಪಿ ಅಭ್ಯರ್ಥಿ ಪರ ನಿಲ್ಲುವುದು ನಿಸ್ಸಂಶಯ. ಅಂದರೆ, ಬಿಜೆಪಿ ಅಭ್ಯರ್ಥಿಪರ ಮತ ಚಲಾಯಿಸಲಿರುವ ನಿರ್ದೇಶಕರ ಸಂಖ್ಯೆ 16 ಆದರೆ, ರೇವಣ್ಣ ಪರ ಕೇವಲ ಇಬ್ಬರು ನಿರ್ದೇಶಕರಿದ್ದಾರೆ. ರೇವಣ್ಣ ಎದುರು ಸೋಮಶೇಖರ್ ಸ್ಫರ್ಧಿಸಲಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದಲೇ ಕೆಎಂಎಫ್ ಮೇಲೆ ಒಂದಿಲ್ಲ ಒಂದು ವಿಚಾರದಲ್ಲಿ ಗುದ್ದಾಡುತ್ತಲೇ ಬಂದಿದೆ. ಸರ್ಕಾರವು ಜುಲೈ 17ರಿಂದ ಕೆಎಂಎಫ್ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಿದೆ. 2001-2002ರಿಂದ 2007-08ರ ಲೆಕ್ಕಪತ್ರಗಳ ಪರಿಶೀಲನೆಯನ್ನು ಸರ್ಕಾರ 2008ರ ನವೆಂಬರ್ 8ರಂದು ಆರಂಭಿಸಿದೆ.

ಅರ್ಹತೆ ಇಲ್ಲದ ವ್ಯಕ್ತಿಯನ್ನು ಆಡಳಿತ ನಿರ್ದೇಶರಾಗಿ ನೇಮಿಸಿರುವುದು, ಅನವಶ್ಯಕ ವೆಚ್ಚ, ಹಾಲುಉತ್ಪನ್ನಗಳ ಮಾರಾಟದ ಅವೈಜ್ಞಾನಿಕ ವಿಧಾನ, ನೇಮಕಾತಿಯಲ್ಲಿ ಅವ್ಯವಹಾರ ಮುಂತಾದ ಆರೋಪಗಳನ್ನು ಮಾಡಲಾಗಿದೆ. ಅದಾಗ್ಯೂ ಈ ಕುರಿತು ಹೈಕೋರ್ಟಿಗೆ ತೆರಳಿರುವ ಕೆಎಂಎಫ್ ಅಧಿಕಾರಿಗಳು ಆರೋಪಗಳಿಗೆ ಉತ್ತರಿಸಲು ಜುಲೈ 17ರ ತನಕ ಸಮಯಾವಕಾಶ ಪಡೆದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೇಳೂರು-ಹರತಾಳು ಜಟಾಪಟಿ ನಾಳೆ ಚರ್ಚೆ: ಡಿವಿ
ಲಾಲ್ಬಾಗ್‌ನಲ್ಲಿ ಪಾನ ಪ್ರಿಯರಿಗಾಗಿ ವೈನ್ ಮೇಳ
ರಾತ್ರಿಯಲ್ಲಿ ಆಯತಪ್ಪಿದ ಗೌಡರ ಕೈಗೆ ಶಸ್ತ್ರಕ್ರಿಯೆ
ಸದನದಲ್ಲಿ ಕೋಲಾಹಲ ಎಬ್ಬಿಸಿದ ಕೆಎಂಎಫ್ ರಾಜಕೀಯ
ಆಂಧ್ರದ ಅಕ್ರಮ ನೀರಾವರಿ ವೀಕ್ಷಣೆಗೆ ರಾಜ್ಯದ ತಂಡ
ಬಿಜೆಪಿ ಬಂಡಾಯ: ಈ ಬಾರಿ ಶೆಟ್ಟರ ಬಾವುಟ