ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶಾಸಕ-ಸಚಿವರ ಗಲಾಟೆ: ವರದಿ ಕೇಳಿದ ಡಿವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಸಕ-ಸಚಿವರ ಗಲಾಟೆ: ವರದಿ ಕೇಳಿದ ಡಿವಿ
ಸಾಗರದಲ್ಲಿ ಸಚಿವ ಹರತಾಳು ಹಾಲಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ಜಟಾಪಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ, ಈ ಬಗ್ಗೆ ಇಬ್ಬರಿಂದಲೂ ವರದಿ ಕೇಳುವುದಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಇಬ್ಬರು ಮುಖಂಡರ ನಡುವಿನ ತಪ್ಪು ತಿಳಿವಳಿಕೆಯೇ ಕಾರಣವಾಗಿದೆ. ಆದರೆ ಇದು ಶಿಷ್ಟಚಾರದ ಉಲ್ಲಂಘನೆಯಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸಚಿವ ಹಾಲಪ್ಪ ತಮ್ಮ ಅನೇಕ ಅಭಿವೃದ್ದಿ ಕೆಲಸಗಳ ನಡುವೆ ಪ್ರಗತಿ ಪರೀಶೀಲನೆ ನಡೆಸುವಾಗ ಇಂಥ ಗಡಿಬಿಡಿ ನಡೆದಿರಬಹುದು. ಅದನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ಷೇಪನೆ ವ್ಯಕ್ತಪಡಿಸಿದಾಗ ಭಿನ್ನಾಭಿಪ್ರಾಯಗಳೆದ್ದಿವೆ ವಿನಾಃ ಗಂಭೀರವಾದದ್ದೇನೂ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಮೂಲಕ ಸಚಿವ-ಶಾಸಕರ ನಡುವೆ ಸಾಗರದಲ್ಲಿ ಶನಿವಾರದ ನಡೆದ ಬಿರುಕಿಗೆ ತೇಪೆ ಹಾಕುವ ಪ್ರಕ್ರಿಯೆ ಪ್ರಾರಂಭ ಆಗಿದೆ. ಇದರಿಂದ ಸಾಕಷ್ಟು ಹಾನಿ ಉಂಟಾಗಿತ್ತು. ಈ ಬಗ್ಗೆ ಸ್ವತಃ ಯಡಿಯೂರಪ್ಪನವರೂ ಪ್ರತಿಕ್ರಿಯೆ ನೀಡಲು ಇಚ್ಛಿಸುತ್ತಿಲ್ಲ. ಒಟ್ಟಾರೆಯಾಗಿ ಈ ಪ್ರಕರಣದಿಂದ ಮತ್ತೊಮ್ಮೆ ಬಿಜೆಪಿಯಲ್ಲಿ ಒಡಕಾಗಿರುವುದು ಸ್ಪಷ್ಟವಾಗುತ್ತದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯೂರಿಯಾ ಕೋರಿ ಕೇಂದ್ರಕ್ಕೆ ಪತ್ರ: ಯಡಿಯೂರಪ್ಪ
ಧರ್ಮುಗೆ ಕ್ಲೀನ್‌ಚಿಟ್ ನೀಡಿ ತೆರಳಿದ ಠಾಕೂರ್!
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಪುಟ್ಟೇಗೌಡ
ಮೈಸೂರು ಗಲಭೆ ಹಿಂದೆ ಸಂಘಪರಿವಾರ: ಎಚ್‌ಡಿಕೆ
ಬಿಜೆಪಿ ತೆಕ್ಕೆಗೆ ಬಿದ್ದ ಕೆಎಂಎಫ್
ಬೇಳೂರು-ಹರತಾಳು ಜಟಾಪಟಿ ನಾಳೆ ಚರ್ಚೆ: ಡಿವಿ